Download Our App

Follow us

Home » ರಾಜಕೀಯ » ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

ಸತತ 3ನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ದೌಪ್ರದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದು, ಪ್ರಧಾನಿ ಅವರ ಜೊತೆ ನೂತನ ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಇದರ ಬೆನ್ನಲ್ಲೆ ಇಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ತಮ್ಮ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನರೇಂದ್ರ ಮೋದಿ 2.0 ಸರ್ಕಾರದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ ಸಚಿವರಿಗೆ ಅದೇ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮುಖ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಾರಿಗೆ ಹೆದ್ದಾರಿ ರಾಜ್ಯ ಖಾತೆಯನ್ನು ಇಬ್ಬರಿಗೆ ಹಂಚಲಾಗಿದೆ. ಹರ್ಷ ಮಲ್ಹೋತ್ರ ಹಾಗೂ ಅಜಯ್ ತಮ್ತಾ ಇಬ್ಬರಿಗೆ ಸಾರಿಗೆ ಹೆದ್ದಾರಿ ಖಾತೆ ಹಂಚಲಾಗಿದೆ.

ಯಾರಿಗೆ ಯಾವ ಖಾತೆ?
  • ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್​ ಕೈಗಾರಿಕೆ –
  • ಶೋಭಾ ಕರಂದ್ಲಾಜೆಗೆ ಸಣ್ಣ ಕೈಗಾರಿಕೆ –
  • ಪ್ರಲ್ಹಾದ್​ ಜೋಶಿ – ಆಹಾರ & ಗ್ರಾಹಕ ವ್ಯವಹಾರ, ನವೀಕರಿಸಬಹುದಾದ ಇಂಧನ –
  • ವಿ.ಸೋಮಣ್ಣಗೆ – ಜಲಶಕ್ತಿ & ರೈಲ್ವೆ , ರಾಜ್ಯ ಖಾತೆ –
  • ನಿತಿನ್​ ಗಡ್ಕರಿಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ –
  • ಅಮಿತ್​ ಶಾಗೆ ಗೃಹ ಇಲಾಖೆ –
  • ರಾಜನಾಥ್​ ಸಿಂಗ್​ಗೆ ರಕ್ಷಣಾ ಇಲಾಖೆ
  • ಜೈಶಂಕರ್​ಗೆ ವಿದೇಶಾಂಗ ಇಲಾಖೆ
  • ನಿರ್ಮಲಾ ಸೀತಾರಾಮನ್​ಗೆ, ಹಣಕಾಸು
  • ಜೆ.ಪಿ ನಡ್ಡಾ, ಆರೋಗ್ಯ ಇಲಾಖೆ –
  • ಮನ್ಸೂಖ್​ ಮಾಂಡವೀಯ, ಕಾರ್ಮಿಕ ಖಾತೆ –
  • C.R ಪಾಟೀಲ್​, ಜಲಶಕ್ತಿ ಇಲಾಖೆ –
  • ಹರ್ದೀಪ್​ ಪುರಿ- ಪೆಟ್ರೋಲಿಯಂ
  • ಪಿಯೂಷ್​ ಗೋಯಲ್​ – ಕೇಂದ್ರ ವಾಣಿಜ್ಯ ಖಾತೆ –
  • ಜ್ಯೋತಿರಾಧಿತ್ಯ ಸಿಂದಿಯಾ – ದೂರ ಸಂಪರ್ಕ –
  • ಚಿರಾಗ್​ ಪಾಸ್ವಾನ್​ – ಕೇಂದ್ರ ಕ್ರೀಡಾ ಸಚಿವ –
  • ಶಿವರಾಜ್​ ಸಿಂಗ್​ ಚೌವ್ಹಾಣ್​ – ಕೃಷಿ ಮತ್ತು ಪಂಚಾಯತ್​ ರಾಜ್​ ಇಲಾಖೆ –
  • ಅನ್ನಪೂರ್ಣ ದೇವಿ – ಮಹಿಳಾ ಮತ್ತು ಮಕ್ಕಳ ಇಲಾಖೆ –
  • ಭೂಪೇಂದ್ರ ಯಾದವ್​ – ಪರಿಸರ ಇಲಾಖೆ
  • ಮನೋಹರ್​ ಲಾಲ್​ ಕಟ್ಟರ್​ , ಇಂಧನ ಖಾತೆ
  • ಅಶ್ವಿಗೆ ವೈಷ್ಣವ್​ – ರೈಲ್ವೆ ಖಾತೆ

ಇದನ್ನೂ ಓದಿ : ಬಿಬಿಎಂಪಿ 5 ಭಾಗಗಳಾಗಿ ವಿಂಗಡಿಸಿ ಸುಪ್ರೀಂ ಕೋರ್ಟ್ ಗಮನಕ್ಕೆ ತರಲು ನಿರ್ಧರಿಸಿದ ಸರ್ಕಾರ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here