Download Our App

Follow us

Home » ರಾಜ್ಯ » ಭೋವಿ ನಿಗಮದ ಹಗರಣ – ಗೂಳಿಹಟ್ಟಿ ಶೇಖರ್ ಮತ್ತೊಂದು ಸ್ಫೋಟಕ ಆಡಿಯೋ..!

ಭೋವಿ ನಿಗಮದ ಹಗರಣ – ಗೂಳಿಹಟ್ಟಿ ಶೇಖರ್ ಮತ್ತೊಂದು ಸ್ಫೋಟಕ ಆಡಿಯೋ..!

ಚಿತ್ರದುರ್ಗ : ಬಿಜೆಪಿ ಅಧಿಕಾರವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದ್ದು, ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಲಂಚ ಸಂದಾಯವಾಗಿದೆ ಎಂದು ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಶಾಸಕ ಗೂಳಿಹಟ್ಟಿ ಶೇಖರ್​​ರಿಂದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯ ಹಗರಣದ ಆಡಿಯೋವನ್ನು ಗೂಳಿಹಟ್ಟಿ ತನ್ನದೇ ವಾಟ್ಸಪ್​​ ಸ್ಟೇಟಸ್​ಗೆ ಆಡಿಯೋ ಹಾಕಿ, ಹಾಲಿ ಸಂಸದ , ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೆಸರು ಪ್ರಸ್ತಾಪಿಸಿದ್ದರು.

ಇದೀಗ ಭೋವಿ ನಿಗಮಕ್ಕೆ ಸಂಬಂಧಿಸಿದಂತೆ ದಾಖಲೆ ಕೇಳಿದ ಗೂಳಿಹಟ್ಟಿ, ನಿಗಮಕ್ಕೆ 2018-19ರಲ್ಲಿ 127 ಕೋಟಿ, 2019-20 ರಲ್ಲಿ 19 ಕೋಟಿ ಬಂದಿತ್ತು. 2020 -21 ನೇ ಸಾಲಿನಲ್ಲಿ 106 ಕೋಟಿ ಸರ್ಕಾರದಿಂದ ಬಂದಿತ್ತು. 2021-22ರಲ್ಲಿ 40 ಕೋಟಿ, 2022-23 ರಲ್ಲಿ 107 ಕೋಟಿ ಫಂಡ್ ಬಂದಿತ್ತು. ವಿವೇಚನಾ ಕೋಟ ತೋರಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.

ಹೊರ ಗುತ್ತಿಗೆ ನೌಕರಿಗೆ ಅನಿಕಾ ಎಂಟರ್ ಪ್ರೈಸಸ್​ಗೆ 1.94 ಕೋಟಿ ಹೋಗಿದೆ. ಕೊವೀಡ್ ವೇಳೆ 1.78 ಕೋಟಿ ಹಣ ಸಾಯಿ ಥೆರಪಿಸ್ಟ್ ಸಂಸ್ಥೆಗೆ ಹಾಕಿದ್ದಾರೆ. ಭೋವಿ ನಿಗಮಕ್ಕೂ ಸಾಯಿ ಥೆರಪಿಸ್ಟ್ ಗೂ ಏನ್ ಸಂಬಂಧ? ಬೆಡ್ ಖರೀದಿಗೆ 1.78 ಕೋಟಿ ಹಣ ಎಂದು ತೋರಿಸಿದ್ದಾರೆ. 1.78 ಕೋಟಿ ಹಣ ಎಲ್ಲಿ ಹೋಯ್ತು, ಬೆಡ್​​ಗೂ ಸಮಾಜಕ್ಕೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಇನ್ನು ಗುಲ್ಬರ್ಗ, ರಾಯಚೂರಿಗೆ ತಲಾ 20 ಕೋಟಿ ವಿವೇಚನಾ ಕೋಟಾದಲ್ಲಿ ಕೊಟ್ಟಿದ್ದಾರೆ. ರೇಷನ್ ಅಂಗಡಿ ಎಂದು ಮಾಲೀಕನಿಗೆ 10 ಲಕ್ಷ ಹಾಕಿದ್ದಾರೆ. 25 ಸಾವಿರ ಮಾಲೀಕನಿಗೆ ಕೊಟ್ಟು, ಉಳಿದ ಹಣ ವಾಪಸ್ ಪಡೆದಿದ್ದಾರೆ. ಈ ಬಗ್ತೆ ಸೂಕ್ತ ತನಿಖೆ ಆಗಬೇಕೆಂದು ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.

ಇದನ್ನೂ  ಓದಿ : ಚಿಕ್ಕಬಳ್ಳಾಪುರ : ಟ್ರಾನ್ಸ್​​ಫಾರ್ಮರ್​​​ ರಿಪೇರಿ ಮಾಡುವಾಗ ಅವಘಡ – ಲೈನ್​ಮ್ಯಾನ್ ಸಾ*ವು..!

Leave a Comment

DG Ad

RELATED LATEST NEWS

Top Headlines

ಚಿಕ್ಕೋಡಿ : ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಪುಂಡಾಟ ಮೆರೆದ ಯುವಕರು..!

ಬೆಳಗಾವಿ : ಈದ್ ಮಿಲಾದ್  ಹಬ್ಬದ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಕೆಲ ಯುವಕರು ಪುಂಡಾಟ ಮೆರೆದ ಘಟನೆ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ

Live Cricket

Add Your Heading Text Here