ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಾಂಗಣ ಸಹಕಾರ ಸಂಘದ ಅಧ್ಯಕ್ಷನನ್ನು ಪೊಲೀಸರು ಬಂಧಸಿದ್ದಾರೆ. ಸತ್ಯನಾರಾಯಣ ಇಟಕಾರಿ ಬಂಧಿತ ಆರೋಪಿ.
ತೆಲಾಂಗಣದ ನೆಲ್ಲಕುಂಟ ಪ್ರದೇಶದಲ್ಲಿರುವ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿರುವ ಸತ್ಯನಾರಾಯಣ ಇಟಕಾರಿಯನ್ನು 18 ನಕಲಿ ಖಾತೆಗಳ ಸೃಷ್ಟಿಸಿ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಸತ್ಯನಾರಾಯಣ ಇಟಕಾರಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಎದಿರು ಹಾಜರುಪಡಿಸಿದ್ದರು. ಈ ವೇಳೆ ಆರೋಪಿ ಸತ್ಯನಾರಾಯಣ ಇಟಕಾರಿಯನ್ನು ಎಸ್ಐಟಿ ಪೊಲೀಸರು ಎಂಟು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ಇದನ್ನೂ ಓದಿ : ಪತ್ನಿ, ಮಕ್ಕಳೊಂದಿಗೆ ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಶಿಫ್ಟ್ ಆದ ರಿಷಬ್ ಶೆಟ್ಟಿ : ಕಾರಣವೇನು?
Post Views: 53