ದೆಹಲಿ : ಅಂಚೆ ಮತ ಎಣಿಕೆ ನಿಯಮವನ್ನ ಬದಲಿಸಿರೋದಾಗಿ ಕಾಂಗ್ರೆಸ್ ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಅನುಮಾನಕ್ಕೆ ಚುನಾವಣಾ ಆಯೋಗ ತೆರೆ ಎಳೆದಿದೆ. ಪೋಸ್ಟಲ್ ವೋಟ್ ಬಗ್ಗೆ ಇರೋ ಗೊಂದಲಕ್ಕೆ ಚುನಾವಣಾ ಆಯೋಗ ಪರಿಹಾರ ನೀಡಿದೆ.
ಕೇಂದ್ರ ಗೃಹ ಸಚಿವರು 150ಕ್ಕೂ ಹೆಚ್ಚು ಡಿಸಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಎಲೆಕ್ಷನ್ ಕಮಿಷನ್ ನಾಪತ್ತೆಯಾಗಿದೆಯಾ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಇದೀಗ ಕಾಂಗ್ರೆಸ್ ಆರೋಪಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ಕುಮಾರ್ ಉತ್ತರ ನೀಡಿದ್ದಾರೆ.
ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ಕುಮಾರ್ ಮಾತನಾಡಿ, ನಾವು ಅತ್ಯಂತ ಕಟ್ಟುನಿಟ್ಟಿನ ಎಲೆಕ್ಷನ್ ಮಾಡಿದ್ದೇವೆ, ಈ ಬಾರಿ ನಡೆದ ಎಲೆಕ್ಷನ್ ಗಿನ್ನೆಸ್ ದಾಖಲೆ ಬರೆದಿದೆ. 64 ಕೋಟಿ ಮತದಾರರು ಈ ಬಾರಿ ಮತ ಚಲಾವಣೆ ಮಾಡಿದ್ದಾರೆ, ಈ ಬಾರಿ 10,000 ಕೋಟಿಯಷ್ಟು ಅಕ್ರಮ ಹಣ, ವಸ್ತುಗಳು ಸೀಜ್ ಆಗಿವೆ. 2019ರ ಎಲೆಕ್ಷನ್ಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಸೀಜ್ ಆಗಿದೆ, ಈ ಎಲೆಕ್ಷನ್ನಲ್ಲಿ ಯಾವುದೇ ದೊಡ್ಡ ಹಿಂಸಾಚಾರಗಳು ನಡೆದಿಲ್ಲ ಎಂದಿದ್ದಾರೆ.
ಕಟ್ಟುನಿಟ್ಟಿನ ಎಲೆಕ್ಷನ್ ಮಾಡಲು 2 ವರ್ಷ ಸತತ ಪ್ರಯತ್ನ ಮಾಡಿದ್ದೆವು, ನಾಳೆ ಚುನಾವಣಾ ಮತ ಎಣಿಕೆಗೂ ಎಲ್ಲ ತಯಾರಿ ಮಾಡಿದ್ದೇವೆ. ಅಂಚೆ ಮತ ಎಣಿಕೆಯ ಯಾವ ನಿಯಮವೂ ಬದಲಾಗೋದಿಲ್ಲ, ಮೊದಲೇ ಅಂಚೆ ಮತ ಎಣಿಕೆ ಮಾಡುತ್ತೇವೆ ಎಂದು ಆಯೋಗ ಸ್ಪಷ್ಟನೆ ನೀಡಿದೆ. ಈ ವೇಳೆ ಚುನಾವಣಾ ಆಯುಕ್ತರಾದ ಜ್ಞಾನೇಶ್ಕುಮಾರ್, ಸುಖಬೀರ್ ಸಂದು ಸಾಥ್ ನೀಡಿದ್ದಾರೆ.
ಇದನ್ನೂ ಓದಿ : ವಿಧಾನಪರಿಷತ್ ಚುನಾವಣೆ : ಜವರಾಯಿಗೌಡಗೆ ಜೆಡಿಎಸ್ MLC ಟಿಕೆಟ್..!