ಉಡುಪಿ : ದುಷ್ಕೃತ್ಯಕ್ಕೆ ಸಂಚು ಹೂಡಿದ್ದ 6 ಮಂದಿಯ ತಂಡವನ್ನು ಉಡುಪಿ ಕಾಪು ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಶ್ರೀಕಾಂತ್ ಫರಂಗಿಪೇಟೆ, ಅಮಿತ್ ಮುಲ್ಕಿ, ಪ್ರಕಾಶ್ ಕಾಟಿಪಳ್ಳ, ವರುಣ್ ನೀರುಮಾರ್ಗ, ಕಾರ್ತಿಕ್ ಶೆಟ್ಟಿ ಸುರತ್ಕಲ್, ಅಭಿಷೇಕ್ ಎಂದು ಗುರುತಿಸಲಾಗಿದೆ.
ಪೊಲೀಸ್ ರೌಂಡ್ಸ್ ವೇಳೆ ಅನುಮಾನಾಸ್ಪದವಾಗಿ ಸ್ಕಾರ್ಪಿಯೋ ಕಾರು ಕಂಡು ಬಂದಿದೆ. ಈ ವೇಳೆ ಇನ್ಸ್ಪೆಕ್ಟರ್ ಜಯಶ್ರೀ ಮಾಣೆ ಪಿಎಸ್ಐ ಅಬ್ದುಲ್ ಖಾದರ್ಗೆ ಮಾಹಿತಿ ನೀಡಿದ್ದು ಪಿಎಸ್ಐ ಕಾರನ್ನ ಅಡ್ಡಹಾಕಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ಹರಿತವಾದ ಚಾಕು, ಸ್ಟೀಲ್ ರಾಡ್, ಮೆಣಸಿನ ಪುಡಿ ಪತ್ತೆಯಾಗಿದೆ.
ಇನ್ನು ಕಾರಿನಲ್ಲಿದ್ದ ಡ್ರ್ಯಾಗರ್, ಹರಿತವಾದ ಚಾಕು, ಸ್ಟೀಲ್ ರಾಡ್, ಮೆಣಸಿನ ಪುಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಾರು ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ AICC..!