ಬೆಂಗಳೂರು : ಪ್ರಜ್ವಲ್ ರೇವಣ್ಣ SIT ತನಿಖಾ ತಂಡಕ್ಕೆ ಬೆದರಿಕೆ ಹಾಕ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಹೊರಗೆ ಬಂದ ಕೂಡಲೇ ನೋಡ್ಕೋತೀನಿ ಅಂತಾ ಪ್ರಜ್ವಲ್ ಅವಾಜ್ ಹಾಕಿದ್ದಾರೆ ಎಂದು SITಯ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪ್ರಜ್ವಲ್ ಬೆದರಿಕೆ ಬಗ್ಗೆ ಕೋರ್ಟ್ಗೆ ಮಾಹಿತಿ ನೀಡಲು SIT ಸಜ್ಜಾಗಿದೆ. ತನಿಖೆಗೆ ಪ್ರಜ್ವಲ್ ರೇವಣ್ಣ ಅಸಹಕಾರ ತೋರಿದ್ದು, ವಿಚಾರಣೆಗೆ ಬಂದ ಅಧಿಕಾರಿ, ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.
ಪ್ರಜ್ವಲ್ ಬೆದರಿಕೆ ಬಗ್ಗೆ ಏಕಾಏಕಿ ಪ್ರಕರಣ ದಾಖಲಿಸಲು ಆಗಲ್ಲ, ನ್ಯಾಯಾಲಯದ ವಿಚಾರಣೆ ವೇಳೆ ಮಾಹಿತಿ ನೀಡುತ್ತೇವೆ ಎಂದು SIT ಮೂಲಗಳು ಮಾಹಿತಿ ನೀಡಿದೆ. ನಿಮ್ಮ ಕೆಲಸ ನೀವ್ ಮಾಡಿ ನನಗೇನೂ ಗೊತ್ತಿಲ್ಲ, ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಹಾಗೆಯೇ ಪ್ರಜ್ವಲ್ ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುತ್ತಿದ್ದು, 4 ವರ್ಷದ ನಂತರ ದೂರು ಕೊಟ್ಟಿದ್ದೇಕೆ, ಅದನ್ನು ಪತ್ತೆ ಮಾಡಿ ಎಂದು ವಿಚಾರಣೆಗೆ ಬಂದ SIT ಅಧಿಕಾರಿಗಳ ಮುಂದೆ ಪ್ರಜ್ವಲ್ ಹೇಳ್ತಿದ್ದಾರೆ.
ತಿರುಚಿದ ವಿಡಿಯೋಗಳನ್ನು ಹರಿಬಿಟ್ಟು ತೇಜೋವಧೆ ಮಾಡಿದ್ದಾರೆ, ಈ ವಿಡಿಯೋ ಹಿಂದಿರುವ ಕಾರ್ತಿಕ್ ಸೇರಿ ಇತರರನ್ನು ವಿಚಾರಣೆ ಮಾಡಿ, ನನಗೇನೂ ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳ್ತಿದ್ದಾರೆ.
ಮೊಬೈಲ್ ಬಗ್ಗೆ ಕೇಳಿದ್ರೆ ಅಧಿಕಾರಿಗಳ ಮೇಲೆ ಪ್ರಜ್ವಲ್ ಗರಂ ಆಗ್ತಿದ್ದು, ನಿನ್ನೆ ಇಡೀ ದಿನ SIT ಮೊಬೈಲ್ ಬಗ್ಗೆ ಸಾಲು-ಸಾಲು ಪ್ರಶ್ನೆ ಕೇಳಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ನಂತರ SIT ಮತ್ತೆ ವಿಚಾರಣೆ ನಡೆಸಲಿದ್ದು, ಇಂದು ಅಥವಾ ನಾಳೆ ಪ್ರಜ್ವಲ್ನ್ನ ಹಾಸನಕ್ಕೆ ಕರೆದೊಯ್ದು ಸ್ಥಳ ಮಹಜರ್ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ : ಡಿಕೆ ಶಿವಕುಮಾರ್..!