ದಾವಣಗೆರೆ : ಮನೆ ಸಾಲ ಮಂಜೂರು ಮಾಡಲಿಲ್ಲ ಅಂತಾ ದುಷ್ಕರ್ಮಿಗಳು LIC ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ಗೆ ಚಾಕು ಇರಿತ ಘಟನೆ ನಡೆದಿದೆ. ಹರಿಹರದ ಶರಣ್ ಹಲ್ಲೆಗೆ ಒಳಗಾದ ಮ್ಯಾನೇಜರ್.
ಶಿಕಾರಿಪುರದ ನಾಗರಾಜ್, ನಾಸಿರ್ ಸೇರಿ ಇತರರು ಕುಂದಾಪುರದ ಶೆಟ್ಟಿ ಎಂಬುವರ ಮೂಲಕ ನಕಲಿ ದಾಖಲೆ ಸೃಷ್ಟಿಸಿದ್ದರು. ಹರಿಹರದಲ್ಲಿ ಯಾರದ್ದೋ ಮನೆ ತೋರಿಸಿ 49.60 ಲಕ್ಷ ಸಾಲ ಪಡೆಯುವ ಪ್ರಯತ್ನ ಮಾಡಿದ್ದರು. ಆದರೆ ಸಾಲ ಮಂಜೂರಾದ ನಂತರ ನಕಲಿ ದಾಖಲೆ ಎಂಬುದು ಪತ್ತೆಯಾಗಿದ್ದು, ಈ ಹಿನ್ನಲೆ ಫೈನಾನ್ಸ್ ಮ್ಯಾನೇಜರ್ ಶರಣ್ ಸಾಲದ ಚೆಕ್ ತಡೆ ಹಿಡಿದಿದ್ದರು.
ಇದರಿಂದ ಕೋಪಗೊಂಡ ನಾಗರಾಜ್ ಹಾಗು ನಾಸಿರ್ ಸೇರಿ ಆರು ಜನರು ಶರಣ್ ಮೇಲೆ ಕಚೇರಿಯಲ್ಲೇ ಅಟ್ಯಾಕ್ ಮಾಡಿ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿದ್ದಾರೆ. ಇನ್ನು ಮಾಹಿತಿ ಸಿಕ್ಕಿ ತಕ್ಷಣ ಅಲರ್ಟ್ ಕೆಟಿಜೆ ನಗರ ಪೊಲೀಸರು ಹೊನ್ನಾಳಿ ವಡ್ಡಿನಕೆರೆ ಹಳ್ಳದ ಬಳಿ ಕಾರು ತಡೆದು ಪರಿಶೀಲನೆ ಮಾಡಿದ್ದು, ಈ ವೇಳೆ ಪೊಲೀಸರು ನಾಗರಾಜ್ ಹಾಗೂ ನಾಸಿರ್ನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಗುದನಾಳದಲ್ಲಿ 1 ಕೆಜಿ ಚಿನ್ನ ಸ್ಮಗ್ಲಿಂಗ್ – ಕೇರಳದಲ್ಲಿ ಏರ್ ಇಂಡಿಯಾ ಗಗನಸಖಿ ಅರೆಸ್ಟ್..!