Download Our App

Follow us

Home » ಮೆಟ್ರೋ » ಪೆನ್​​ಡ್ರೈವ್​ ಕೇಸ್​ – ಪ್ರಜ್ವಲ್​ ರೇವಣ್ಣ ಅರೆಸ್ಟ್​ ಬಗ್ಗೆ ಹೈವೋಲ್ಟೇಜ್​ ಸಭೆ ನಡೆಸಿದ SIT ಮುಖ್ಯಸ್ಥ ಬಿ.ಕೆ ಸಿಂಗ್..!

ಪೆನ್​​ಡ್ರೈವ್​ ಕೇಸ್​ – ಪ್ರಜ್ವಲ್​ ರೇವಣ್ಣ ಅರೆಸ್ಟ್​ ಬಗ್ಗೆ ಹೈವೋಲ್ಟೇಜ್​ ಸಭೆ ನಡೆಸಿದ SIT ಮುಖ್ಯಸ್ಥ ಬಿ.ಕೆ ಸಿಂಗ್..!

ಬೆಂಗಳೂರು : ಪೆನ್ ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಿಂಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ, ಮೇ 31ರಂದು ಅಂದರೆ ನಾಳೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ, ಜರ್ಮನಿಯ ಮ್ಯೂನಿಚ್‌ ನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಪ್ರಜ್ವಲ್ ಅವರ ಹೆಸರಿನಲ್ಲಿ ಫ್ಲೈಟ್ ಟಿಕೆಟ್ ಬುಕ್ ಆಗಿದೆ.

ಜರ್ಮನಿಯ ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, (ಜರ್ಮನಿಯ ಸ್ಥಳೀಯ ಕಾಲಮಾನ) ಇಂದು ಮಧ್ಯಾಹ್ನ 12.05ಕ್ಕೆ ಮ್ಯೂನಿಚ್‌ನಲ್ಲಿ ಫ್ಲೈಟ್ ಹತ್ತಲಿದ್ದು, ಮಧ್ಯರಾತ್ರಿ 12.30ರ ಹೊತ್ತಿಗೆ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ತಂಡ ಸಜ್ಜಾಗಿದೆ.

ಇನ್ನು ಪ್ರಜ್ವಲ್ ರೇವಣ್ಣ ಬರ್ತಿರುವಾಗಲೇ ಬಂಧಿಸುವ ಬಗ್ಗೆ ನಿನ್ನೆ ಸಿಐಡಿ ಕಛೇರಿಯಲ್ಲಿ ಅಧಿಕಾರಿಗಳ ಜತೆ SIT ಮುಖ್ಯಸ್ಥ ಬಿ.ಕೆ ಸಿಂಗ್ ಅವರು ಸಭೆ ನಡೆಸಿ ಚರ್ಚಿಸಿದ್ದಾರೆ. ಪ್ರಜ್ವಲ್ ಬಂದ ಕೂಡಲೇ ಅರೆಸ್ಟ್ ಮಾಡಲು SIT ಟೀಂ ರೆಡಿಯಾಗಿದ್ದು, ಅರೆಸ್ಟ್ ಮಾಡಿದ ನಂತರ ಪ್ರಕ್ರಿಯೆಗಳು ಹೇಗಿರಬೇಕು‌‌? ಯಾರ್ಯಾರಿಗೆ ಯಾವ್ಯಾವ ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಅಧಿಕಾರಿಗಳ ಜತೆ SIT ಚೀಫ್ ಬಿ.ಕೆ ಸಿಂಗ್ ಅವರು ಸಭೆ ನಡೆಸಿದ್ದಾರೆ.

ಈಗಾಗಲೇ ಪ್ರಜ್ವಲ್ ಬೆಂಗಳೂರಿಗೆ ಲ್ಯಾಂಡ್ ಆದ ಕೂಡಲೇ ಅರೆಸ್ಟ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಇಬ್ಬರು ACPಗಳಿಗೆ ಅರೆಸ್ಟ್ ಇನ್ ಚಾರ್ಜ್ ನೀಡಲಾಗಿದೆ. ಹಾಗೆಯೇ ಇಂದು ಮಧ್ಯಾಹ್ನ ಹೊರಡೋ ವಿಮಾನದ ಸ್ಟೇಟಸ್ ಚೆಕ್ ಮಾಡುವಂತೆ SIT ಟೆಕ್ನಿಕಲ್ ಟೀಂಗೆ ಸೂಚಿಸಿದ್ದಾರೆ.

ಜರ್ಮನಿಯಿಂದ ಹೊರಡಲಿರುವ ವಿಮಾನದ ಮೇಲೆ SIT ಹದ್ದಿನ ಕಣ್ಣಿಟ್ಟಿದ್ದು, ಈಗಾಗಲೇ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರಲು ಎರಡು ಬಾರಿ ವಿಮಾನ ಟಿಕೆಟ್​ ಬುಕ್ ಮಾಡಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ವಿಮಾನ ಹೊರಡುವ ಸ್ವಲ್ಪ ಸಮಯದ ಮೊದಲೇ ಟಿಕೆಟ್​ ರದ್ದು ಮಾಡಿದ್ದರು. ಈ ಮೂಲಕ ಎಸ್​ಐಟಿ ಅಧಿಕಾರಿಗಳನ್ನು ಯಾಮಾರಿಸಿದ್ದರು. ಇನ್ನು ನಾಳೆ ಪ್ರಜ್ವಲ್ ಬೆಂಗಳೂರಿಗೆ ಬರ್ತಾರ? ಇಲ್ವಾ? ಎಂಬ ಬಗ್ಗೆ ಗೊಂದಲಗಳಿದ್ದು, ಇದಕ್ಕಾಗಿ ಎಸ್​ಐಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ.

ಇದನ್ನೂ ಓದಿ : ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರ ಕೇಸ್​ : ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಸಸ್ಪೆಂಡ್​​..!

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here