ಮೈಸೂರು : ವರ್ಷ ಕಳೆದರೂ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯವಿದ್ದ ಹೋಟೆಲ್ ಬಿಲ್ ಮಂಜೂರಾಗದ ಹಿನ್ನಲೆಯಲ್ಲಿ ರಾಡಿಷನ್ ಬ್ಲೂ ಹೋಟೆಲ್ ಮ್ಯಾನೇಜ್ ಮೆಂಟ್ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಕಳೆದ ವರ್ಷ ಏಪ್ರಿಲ್ನಲ್ಲಿ ಬಂಡೀಪುರ ಹುಲಿ ಯೋಜನೆ 50ನೇ ವರ್ಷದ ಸಂಭ್ರಮದಲ್ಲಿ ಭಾಗಿಯಾಗಲು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಿದ್ದಾರು. ಅರಣ್ಯ ಇಲಾಖೆ 80 ಲಕ್ಷ 60. ಸಾವಿರ ಬಿಲ್ ಭರಿಸಿತ್ತು. ಆದರೆ ವರ್ಷ ಕಳೆದರೂ ಪ್ರಧಾನಿ ವಾಸ್ತವ್ಯ ಹೂಡಿದ ಹೋಟೆಲ್ ಬಿಲ್ ಮಂಜೂರಾಗಿಲ್ಲ.
ಈ ನಿಟ್ಟಿನಲ್ಲಿ ರಾಡಿಷನ್ ಬ್ಲೂ ಹೋಟೆಲ್ ನ ಜನರಲ್ ಮ್ಯಾನೇಜರ್ ಅರಣ್ಯ ಇಲಾಖೆ ಡಿಸಿಎಫ್ ಗೆ ಪತ್ರ ಬರೆದಿದ್ದು, ಬಿಲ್ ಭರಿಸಲು ವಿಳಂಬ ಮಾಡಿದ್ದಕ್ಕೆ ಮ್ಯಾನೇಜ್ ಮೆಂಟ್ ಶೇ 18ರಂತೆ ಬಡ್ಡಿ ವಿಧಿಸಿದೆ. ಇದರೊಂದಿಗೆ 12.09 ಲಕ್ಷ ರೂ ಬಡ್ಡಿ ಸೇರಿಸಿ ಬಿಲ್ ಕೊಡುವಂತೆ ಪತ್ರದಲ್ಲಿ ಉಲ್ಲೇಖವಿದ್ದು, ಬಿಲ್ ಭರಿಸುವುದು ಇನ್ನಷ್ಟು ವಿಳಂಬ ಮಾಡಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಉಡುಪಿ ಗ್ಯಾಂಗ್ ವಾರ್ ಕೇಸ್- ಮತ್ತೋರ್ವ ಆರೋಪಿ ಅರೆಸ್ಟ್..!