ಕಲಬುರಗಿ : ಕುಡಿದ ಮತ್ತಲ್ಲಿ ಈಜಲು ಹೋಗಿ ಹೈದರಾಬಾದ್ ಮೂಲದ ಯುವಕ ನೀರು ಪಾಲಾದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಪಟವಾಡ ಗ್ರಾಮದ ಬಳಿ ನಡೆದಿದೆ.
ಮಹ್ಮದ್ ಸಾಜೀದ್ ಎನ್ನುವ ಯುವಕ ಗೆಳೆಯರೊಂದಿಗೆ ಕಮಲಾಪುರ ಪಕ್ಕದ ದರ್ಗಾ ಜಾತ್ರೆಗೆ ಬಂದಿದ್ದ. ಮಾರ್ಗ ಮಧ್ಯೆ ಕುಡಿದ ಮತ್ತಿನಲ್ಲಿ ಬ್ರಿಜ್ ಕಂ ಬ್ಯಾರೇಜಲ್ಲಿ ಈಜಲು ಹೋಗಿದ್ದಾನೆ. ಈ ವೇಳೆ ಸಾಜೀದ್ ನೀರಿನಲ್ಲಿ ಮುಳುಗಿದ್ದಾನೆ.
ಈ ದೃಶ್ಯವನ್ನ ಬ್ರಿಜ್ ಮೇಲಿದ್ದ ಇವನ ಗೆಳೆಯ ಮೊಬೈಲ್ನಲ್ಲಿ ಶೂಟ್ ಮಾಡಿದ್ದಾನೆ. ಕಮಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಿತರ ನಿರ್ಲಕ್ಷ್ಯದ ಬಗ್ಗೆ ಮೃತನ ಸೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿನಿ ಪ್ರಬುಧ್ಯಾ ಕೊಲೆಯಾಗಿರುವುದು ಧೃಡ – ಓರ್ವ ಪೊಲೀಸ್ ವಶಕ್ಕೆ..!
Post Views: 89