ಬೆಂಗಳೂರು : ವಕೀಲೆ ಚೈತ್ರಾ ಗೌಡ ನಿಗೂಢ ಸಾವು ಪ್ರಕರಣಕ್ಕೆ ಸಂಬಧಿಸಿದಂತೆ ಚೈತ್ರಾರದ್ದು ಆತ್ಮಹತ್ಯೆ ಎಂಬುದು ಸಾಬೀತಾಗಿದೆ. ಪೊಲೀಸರ ತನಿಖೆಯಲ್ಲಿ ಮನೆಯಲ್ಲಿ ಸಿಕ್ಕ ಡೆತ್ ನೋಟ್ ಚೈತ್ರಾ ಬರೆದಿರೋದು ಎಂದು ಕನ್ಫರ್ಮ್ ಆಗಿದ್ದು, ಈ ಮೂಲಕ ಚೈತ್ರಾ ಸಾವಿನ ರಹಸ್ಯ ಬಯಲಾಗಿದೆ.
ಮೇ 11 ರಂದು ಕೆಎಎಸ್ ಅಧಿಕಾರಿ ಪತ್ನಿ ಹೈಕೋರ್ಟ್ ವಕೀಲೆ ಚೈತ್ರಾಗೌಡ ಅವರು ಅಣ್ಣಯ್ಯಪ್ಪ ಲೇಔಟ್ನ ಮನೆಯಲ್ಲಿ ಸೂಸೈಡ್ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಚೈತ್ರಾ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿ ದೂರು ನೀಡಿದ್ದರು.
ತನಿಖೆ ಕೈಗಿತ್ತಿಕೊಂಡ ಪೊಲೀಸರು ದೂರಿನ ಮೇರೆಗೆ, ಚೈತ್ರಾ ಪತಿ KAS ಅಧಿಕಾರಿ ಶಿವಕುಮಾರ್ ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಪತ್ನಿ ಜೊತೆ ಯಾವುದೇ ವೈಷಮ್ಯ ಇರಲಿಲ್ಲ.
ಹಣಕಾಸಿನ ಸಮಸ್ಯೆಯೂ ಇರಲಿಲ್ಲ ಆದ್ರೆ ಚೈತ್ರಾ ಖಿನ್ನಳಾಗಿದ್ದಳು ಎಂದು ಚೈತ್ರಾ ಪತಿ ತಿಳಿಸಿದ್ದಾರು.
ಇನ್ನು ಚೈತ್ರಾ ಅವರು ಕುಟುಂಬಸ್ಥರ ಬಳಿ ಮೂರು ತಿಂಗಳ ಹಿಂದೆ ಸಾಯೋ ಮಾತಾಡಿದ್ದರು. ಸಾಯೋ ಮಾತಾಡಿದ ಬಳಿಕವೇ ಡೆತ್ ನೋಟ್ ಬರೆದಿಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲೂ ಆತ್ಮಹತ್ಯೆ ಅನ್ನೋದು ಬಯಲಾಗಿದೆ ಎಂದು 10 ದಿನಗಳ ತನಿಖೆ ಬಳಿಕ ಹಿರಿಯ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರಾಣೆಬೆನ್ನೂರಲ್ಲಿ ಭೀಕರ ಅಪಘಾತ : ಸೇತುವೆಯಿಂದ ಪಲ್ಟಿ ಹೊಡೆದ ಕಾರು – ನಾಲ್ವರು ಸಾ*ವು, 6 ಮಂದಿಗೆ ಗಂಭೀರ ಗಾಯ..!