ಬೆಂಗಳೂರು : ಮನೆಯ ಬಾತ್ ರೂಂನಲ್ಲಿ ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ BBM ವಿದ್ಯಾರ್ಥಿನಿ ಪ್ರಭುಧ್ಯಾಳ ಮೃತದೇಹ ಮೇ15ರಂದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರ ತನಿಖೆ ವೇಳೆ ಪ್ರಭುಧ್ಯಾಳ ಕೊಲೆಯಾಗಿರುವುದು ಧೃಡವಾಗಿದೆ. ಈ ಹಿನ್ನಲೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಘಟನೆ? ಮೇ 15ರಂದು ಪ್ರಭುಧ್ಯಾ ಶವ ಪತ್ತೆಯಾಗಿತ್ತು.ಇದನ್ನು ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಿದ್ದರು. ಆದ್ರೆ, ಮೃತದೇಹ ಪತ್ತೆಯಾದ ಮೂರು ದಿನಗಳ ನಂತರ ಮೃತ ಯುವತಿ ತಾಯಿ ಸೌಮ್ಯ ಅವರು ನೀಡಿದ ದೂರಿನ ಮೇಲೆ ಸೆಕ್ಷನ್ 302ರಡಿ ಕೊಲೆ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಭುಧ್ಯಾ ತಲೆಗೆ ಹೊಡೆದು, ಕತ್ತು ಕೊಯ್ದು, ಮುಖಕ್ಕೂ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಾಯಿ ಸೌಮ್ಯ ಆರೋಪಿಸಿದ್ದರು.
ಇನ್ನು, ಪೋಸ್ಟ್ ಮಾರ್ಟಂ ರಿಪೋರ್ಟ್ನಲ್ಲೂ ಇದು ಕೊಲೆ ಅನ್ನೋದು ಪತ್ತೆಯಾಗಿದ್ದು, ಈ ಹಿನ್ನೆಲೆ ಕೊಲೆ ಪ್ರಕರಣ ದಾಖಲಿಸಿ ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಎಲ್ಲಾ CCTV ದೃಶ್ಯ ಪರಿಶೀಲನೆ ಮಾಡಿದಾಗ ಒಬ್ಬನ ಸಂಚಾರ ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರಾಣೆಬೆನ್ನೂರಲ್ಲಿ ಭೀಕರ ಅಪಘಾತ : ಸೇತುವೆಯಿಂದ ಪಲ್ಟಿ ಹೊಡೆದ ಕಾರು – ನಾಲ್ವರು ಸಾ*ವು, 6 ಮಂದಿಗೆ ಗಂಭೀರ ಗಾಯ..!