ಬೆಂಗಳೂರು : ನಗರದಲ್ಲಿ ಕಾರ್ ಡ್ರೈವರ್ ಓರ್ವ ಹುಚ್ಚಾಟ ಮೆರೆದು, ಮನ ಬಂದಂತೆ ಕಾರನ್ನು ಓಡಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದ ಘಟನೆ ಮೇ 21ರಂದು ಬೆಳಗಿನ ಜಾವ ರಾಜಾಜಿನಗರದಲ್ಲಿ ನಡೆದಿದೆ.
ಚಾಲಕ ಅಡ್ಡಾದಿಡ್ಡಿ ಕಾರು ಓಡಿಸಿ ಪಾದಚಾರಿ ಹಾಗೂ ಹಲವು ವಾಹನಗಳಿಗೆ ಗುದ್ದಿದ್ದಾನೆ. ಘಟನೆಯಲ್ಲಿ ಪಾದಚಾರಿ ವೆಂಕಟೇಶ್ ಎಂಬುವವರ ಕೈ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರ್ ಸೇರಿ ವಾಹನಗಳಿಗೂ ಕಾರು ಡಿಕ್ಕಿ ಹೊಡೆದಿದ್ದು, ಚಾಲಕನ ವಿರುದ್ದ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ವಿಜಯನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಾಯಾಳು ವೆಂಕಟೇಶ್ ಪುತ್ರ ನೀಡಿದ ದೂರಿನ ಮೇಲೆ FIR ದಾಖಲಿಸಲಾಗಿದ್ದು, ಕಾರ್ ಡ್ರೈವರ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಪೆನ್ ಡ್ರೈವ್ ಪ್ರಕರಣ – ಪ್ರಜ್ವಲ್ ರೇವಣ್ಣ ಗನ್ಮ್ಯಾನ್, ಕಾರ್ ಡ್ರೈವರ್ಗೂ SIT ನೋಟಿಸ್..!