ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದು ಮಾಡಲು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ (ಎಂಇಎ) ಎಸ್ಐಟಿ ಪತ್ರ ಬರೆದಿದೆ. ಲುಕೌಟ್ ನೋಟಿಸ್, ಬ್ಲೂಕಾರ್ನರ್ ನೋಟಿಸ್ ಟ್ಯಾಗ್ ಮಾಡಿ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈಗಾಗಲೇ ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದರೂ ಇದುವರೆಗೂ ಪ್ರಜ್ವಲ್ ಸುಳಿವು ದೊರೆತಿಲ್ಲ.
ಶತಾಯಗತಾಯ ಬಂಧಿಸಬೇಕೆಂದು ಪಣತೊಟ್ಟಿರುವ ಎಸ್ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳ ಹಿಂದಷ್ಟೇ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಪಡೆದಿದ್ದರು. ಇದೀಗ, ರಾಜತಾಂತ್ರಿಕ ಪಾಸ್ ಪೋರ್ಟ್ನಡಿ ವಿದೇಶಕ್ಕೆ ಹಾರಿರುವ ಪ್ರಜ್ವಲ್ ಪಾಸ್ಪೋರ್ಟ್ ರದ್ದು ಕೋರಿ SIT ಪತ್ರ ಬರೆದು ಮನವಿ ಮಾಡಿದೆ.
ಇನ್ನು, ಪ್ರಜ್ವಲ್ ರೇವಣ್ಣಗೆ ವಾಪಸ್ ಬರದೇ ವಿಧಿ ಇಲ್ಲದಂತಾಗಿದೆ. ಒಂದು ವೇಳೆ ಪಾಸ್ ಪೋರ್ಟ್ ರದ್ದಾದ್ರೆ ವಿದೇಶ ತೊರೆಯಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಕಂಡಲ್ಲಿ ಅರೆಸ್ಟ್ ಆಗೋ ಸಂಕಷ್ಟಕ್ಕೆ ಪ್ರಜ್ವಲ್ ಸಿಲುಕಲಿದ್ದಾರೆ. ಮತ್ತೊಂದೆಡೆ ವಾಪಸ್ ಬರುವಂತೆ ಚಿಕ್ಕಪ್ಪ ಹೆಚ್ಡಿ ಕುಮಾರಸ್ವಾಮಿಯವರು ಮನವಿ ಮಾಡಿದ್ದಾರೆ. ಕುಟುಂಬದ ಗೌರವ ಉಳಿಸಲು 48 ಗಂಟೆಗಳಲ್ಲಿ ವಾಪಸ್ ಬರುವಂತೆ ಕರೆ ನೀಡಿದ್ದಾರೆ.
ಇದನ್ನೂ ಓದಿ : ದೀಪಿಕಾ ಪಡುಕೋಣೆ ಬಾಡಿಗೆ ತಾಯ್ತನದ ಗಾಸಿಪ್ಗೆ ಬ್ರೇಕ್ : ಬೇಬಿ ಬಂಪ್ ವಿಡಿಯೋ ವೈರಲ್..!