ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿಯೇ ಕಾಲರಾ ಪತ್ತೆಯಾಗಿದೆ. ತಗಡೂರು ಗ್ರಾಮಸ್ಥರು ವಾಂತಿ-ಬೇಧಿಯಿಂದ ತತ್ತರಿಸುತ್ತಿದ್ದು, 25 ಪುಟ್ಟ ಮಕ್ಕಳು ಸೇರಿ 114 ಮಂದಿಯಲ್ಲಿ ಕಾಲರಾ ಲಕ್ಷಣ ಇರುವುದು ಕಂಡು ಬಂದಿದೆ.
ಕಲುಷಿತ ನೀರು ಸೇವನೆಯಿಂದ ಕಾಲರಾ ಬಂದಿರೋ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ PDO ದಿವಾಕರ್, EO ಪೂರ್ಣಿಮಾ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ನಂಜನಗೂಡಿನ ತಗಡೂರು ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಹೆಚ್ಚುವರಿ ಚಿಕಿತ್ಸೆಗಾಗಿ ಐವರನ್ನು ಮೈಸೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ತಗಡೂರು ಪಂಚಾಯಿತಿಯ 1,2,3,ನೇ ವಾರ್ಡಿನಲ್ಲಿ ಕಾಲರಾ ಪತ್ತೆಯಾಗುತ್ತಿದ್ದಂತೆ, DHO ಡಾ.ಕುಮಾರಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಜಿಲ್ಲಾ ಕಾಲರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ, THO ಡಾ. ಈಶ್ವರ್ ಭೇಟಿ ನೀಡಿದ್ದಾರೆ. ಮೇಲ್ನೋಟಕ್ಕೆ ಬೋರ್ವೆಲ್ ನೀರಿನಿಂದ ಕಾಲರ ಬಂದಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಮದ 12 ಬೋರ್ವೆಲ್ ಪೈಕಿ 4 ಪಂಪ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಇನ್ನು ಗ್ರಾಮದ ಪ್ರತಿ ಮನೆಗೆ ರೋಗ ನಿರೋಧಕ ಇಂಜೆಕ್ಷನ್, ORS ಪೌಡರ್ ವಿತರಣೆ ಮಾಡಲಾಗಿದ್ದು, ಗ್ರಾಮದಲ್ಲಿ 10ಕ್ಕೂ ಹೆಚ್ಚು ಡಾಕ್ಟರ್ಗಳು ಮೊಕ್ಕಾಂ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದರೊಂದಿಗೆ ದಿನಕ್ಕೆ 3 ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ : ಮೇ .27ರಿಂದ ಕಲರ್ಸ್ ಕನ್ನಡದಲ್ಲಿ “ನಿನಗಾಗಿ” ಹೊಸ ಧಾರಾವಾಹಿ ಶುರು..!