ದೆಹಲಿ : ದೆಹಲಿಯಲ್ಲಿ AAP-BJP ಬಿಗ್ ವಾರ್ ಶುರುವಾಗಿದ್ದು, ಬಿಜೆಪಿ ಆಫೀಸ್ಗೆ ನುಗ್ಗಲು AAP ಪ್ಲಾನ್ ಮಾಡಿದೆ. ನಾವ್ ನಿಮ್ಮ ಕಚೇರಿಗೆ ಬರ್ತಿದ್ದೇವೆ, ತಡೆದು ನಮ್ಮನ್ನು ಬಂಧಿಸಿ ನೋಡೋಣ ಎಂದು ಸಿಎಂ ಕೇಜ್ರಿವಾಲ್ ನಿನ್ನೆ ಬಿಜೆಪಿಗೆ ಸವಾಲ್ ಹಾಕಿದ್ದರು. ಇಂದು ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಕಚೇರಿಗೆ ನುಗ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಎಎಪಿ ಸಚಿವರು, ಶಾಸಕರು, ಮುಖಂಡರ ನೇತೃತ್ವದಲ್ಲಿ ಬಿಜೆಪಿ ಆಫೀಸ್ಗೆ ಮುತ್ತಿಗೆ ಹಾಕಲಿದ್ದಾರೆ.
ಹಾಗಾಗಿ ಕಳೆದ ರಾತ್ರಿಯಿಂದಲೇ ದೆಹಲಿ ಬಿಜೆಪಿ ಕಚೇರಿಗೆ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಅರೆಸೇನಾ ಪಡೆಯನ್ನ ನಿಯೋಜಿಸಿದ್ದು, ಅಬಕಾರಿ ನೀತಿ ಕೇಸ್ನಲ್ಲಿ ಟಾರ್ಗೆಟ್ ಮಾಡ್ತಿರುವ ಆರೋಪ ವ್ಯಕ್ತವಾಗಿದೆ.
AAP ನಾಯಕರನ್ನು ಬಿಜೆಪಿ ಜೈಲಿಗೆ ಹಾಕಿಸೋ ಪಿತೂರಿ ಮಾಡಿದ್ದು, ನಾವೇ ಬಿಜೆಪಿ ಕಚೇರಿಗೆ ಬರ್ತೇವೆ ಬಂಧಿಸಿ ನೋಡಿ ಎಂದು ಸವಾಲ್ ಹಾಕಿದ್ದಾರೆ. ಇದೀಗ ಮಹಾ ಹೈಡ್ರಾಮಾಗೆ ಸಾಕ್ಷಿಯಾಗುತ್ತಾ ರಾಷ್ಟ್ರ ರಾಜಧಾನಿ ದೆಹಲಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣೆ : ಬಟ್ಟೆಗಳಲ್ಲಿ ಅಡಗಿಸಿಟ್ಟಿದ್ದ ಕೋಟಿ-ಕೋಟಿ ಚಿನ್ನ ಪತ್ತೆ..!