ಹುಬ್ಬಳ್ಳಿ : ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಆರೋಪದ ಮೇಲೆ ಅಪರಾಧ ವಿಭಾಗದ ಡಿಸಿಪಿ ರಾಜೀವ್ ಅವರನ್ನೂ ಇಲಾಖೆ ಸಸ್ಪೆಂಡ್ ಮಾಡಿದೆ.
ಅಂಜಲಿ ಹತ್ಯೆಗೂ ಮುನ್ನ ಪೊಲೀಸ್ ಠಾಣೆಗೆ ಆಕೆಯ ಕುಟುಂಬ ಸದಸ್ಯರು ಹೋಗಿದ್ದರು. ಈ ವೇಳೆ ಯಾರೂ ಹತ್ಯೆ ಮಾಡಲ್ಲ, ಕಲ್ಪನೆ ಮಾಡಿಕೊಳ್ಳಬೇಡಿ ಎಂದು ಅಧಿಕಾರಿಗಳು ಹೇಳಿ ಕಳಿಸಿದ್ದರಂತೆ.
ಹೀಗಾಗಿ ಡಿಸಿಪಿ ಮೇಲೆ ಅಮಾನತು ಕ್ರಮ ಜರುಗಿಸಲಾಗಿದೆ. ಇದೇ ಪ್ರಕರಣದಲ್ಲಿ ಕರ್ತವ್ಯ ಲೋಪದ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯ PSI ಚಂದ್ರಶೇಖರ ಚಿಕ್ಕೋಡಿ, ಮಹಿಳಾ ಮುಖ್ಯಪೇದೆ ರೇಖಾ ಹಾವರೆಡ್ಡಿ ಸಸ್ಪೆಂಡ್ ಮಾಡಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಮಾಡಿದ್ದರು. ಇದೀಗ ಡಿಸಿಪಿ ರಾಜೀವ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ : ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪೈಲೆಟ್ ಸಮಯಪ್ರಜ್ಞೆಗೆ 179 ಪ್ರಯಾಣಿಕರು ಸೇಫ್..!
Post Views: 165