ಬೆಂಗಳೂರು : ಎಸ್ಐಟಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಬಾರದೇ ಫಾರಿನ್ನಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಪ್ರಜ್ವಲ್ ರೇವಣ್ಣ ಲಾಕ್ ಮಾಡಲು ಕೊನೆಗೂ SIT ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ.
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪ್ರಕರಣದಲ್ಲಿ ಕೊನೆಗೂ ವಾರಂಟ್ ಜಾರಿಯಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ವಾರಂಟ್ ಜಾರಿ ಮಾಡಿಸಿದ್ದು, ವಾರಂಟ್ ಸಹಾಯದಿಂದ ರೆಡ್ ಕಾರ್ನರ್ ನೋಟಿಸ್ ಪ್ರಕ್ರಿಯೆ ಶುರುವಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ವಾರಂಟ್ ಜಾರಿ ಮಾಡುವಂತೆ SIT ಮನವಿ ಮಾಡಿಕೊಂಡಿತ್ತು. ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ರೆ ವಿದೇಶದಲ್ಲೇ ಇಂಟರ್ಪೋಲ್ ಮೂಲಕ ಪ್ರಜ್ವಲ್ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಎಸ್ಐಟಿ ನೋಟಿಸ್ ಕೊಟ್ಟರೂ ಪ್ರಜ್ವಲ್ ರೇವಣ್ಣ ಕ್ಯಾರೇ ಎಂದಿರಲಿಲ್ಲ. ಮೊದಲ ನೋಟಿಸ್ಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ 22 ದಿನಗಳಾದರೂ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ಸಾಗಿಲ್ಲ, ವಿಚಾರಣೆಗೂ ಹಾಜರಾಗಿಲ್ಲ. ಇದೀಗ ಕೋರ್ಟ್ ವಾರೆಂಟ್ ಹೊರಡಿಸಿರೋದ್ರಿಂದ ಈ ಬಾರಿಯಾದ್ರೂ ಪ್ರಜ್ವಲ್ ವಿಚಾರಣೆಗೆ ಬರ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ : KSMSCLನಿಂದ ಬಾರಿ ಎಡವಟ್ಟು : ಮನುಷ್ಯನ ಬಳಕೆಗೆ ಪಶುಗಳ ಮೆಡಿಸಿನ್ ಪೂರೈಕೆ..!