ತುಮಕೂರು : ಕರ್ನಾಟಕದಲ್ಲಿ ಶಾಂತಿ ಕದಡಲು ನಾವ್ ಬಿಡಲ್ಲ. ಶಾಂತಿ-ನೆಮ್ಮದಿಯಿಂದ ಬದುಕುವ ವಾತಾವರಣ ಇದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಏನ್ ಕ್ರಮ ಬೇಕಾದ್ರೂ ಕೈಗೊಳ್ತೇವೆ
ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರ್ನಾಟಕದಲ್ಲಿ ಶಾಂತಿ ಕದಡುತ್ತಿದೆ ಎಂದು ಆರೋಪಿಸಿದ್ದ ಬಿಜೆಪಿ, ಜೆಡಿಎಸ್ಗೆ ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ಶಾಂತಿ ಕದಡುತ್ತಿದೆ ಎಂಬ ಬಿಜೆಪಿ, ಜೆಡಿಎಸ್ ಆರೋಪಕ್ಕೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ವಿಪಕ್ಷದವರನ್ನು ಹೇಳಿ-ಕೇಳಿ ನಾವ್ ಸರ್ಕಾರ ನಡೆಸಬೇಕಾ..? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಕೊಲೆ, ಸುಲಿಗೆ ಆಗಿದ್ದವು. ಎಲ್ಲಾ ಅಂಕಿ ಅಂಶಗಳು ನಮ್ಮ ಬಳಿಯೂ ಇವೆ ಎಂದು ತಿಳಿಸಿದ್ದಾರೆ.
ಯಾರೇ ಶಾಂತಿ ಕದಡಲು ಯತ್ನಿಸಿದ್ರೂ ನಾವು ಸಹಿಸಲ್ಲ. ವಿಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ ಎಂದು ತುಮಕೂರಿನ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ : ಮೆಂಟಲ್ ಕೇಸ್ ಮಾತಿಗೆಲ್ಲಾ ರಿಯಾಕ್ಟ್ ಮಾಡಲ್ಲ : ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು..!