ಹಾಸನ: ಎಂಪಿ ಕ್ಯಾಟ್ರಸ್ನಲ್ಲಿ ಪ್ರತಿನಿತ್ಯ ಜನಜಂಗುಲಿ ಇರುತ್ತಿತ್ತು, ಆದರೆ ಚುನಾವಣೆ ಮುಗಿದ ಮೇಲೆ ಹಾಗೂ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಸಂಚಲನ ಮೂಡಿಸಿದ ಮೇಲೆ ಯಾರೂ ಈ ಕಡೆ ಸುಳಿಯದೇ ಖಾಲಿ ಖಾಯಿಯಾಗಿರುವುದು ಕಂಡುಬಂದಿದೆ.
ನಗರದ ಆರ್.ಸಿ. ರಸ್ತೆ, ಎಸ್ಪಿ ಕಛೇರಿ ಪಕ್ಕದಲ್ಲಿರುವ ಲೋಕಸಭಾ ಸದಸ್ಯರ ನಿವಾಸ ದಿನನಿತ್ಯ ಜನರಿಂದ ತುಂಬಿ ತುಳುಕುತ್ತಿತ್ತು. ಎಂಪಿ ಚುನಾವಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಸುದ್ದಿಯಲ್ಲಿದೆ.
ಚುನಾವಣೆ ಮುಗಿದ ತಕ್ಷಣ ಸಂಸದ ಪ್ರಜ್ವಲ್ ರೇವಣ್ಣ ಅವರು ಭಾರತ ದೇಶದಿಂದ ಜರ್ಮನಿ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಸದರ ನಿವಾಸ ಬಿಕೋ ಎನ್ನುತ್ತಿದೆ. ಜೊತೆಗೆ ಅಶ್ಲೀಲ ವಿಡಿಯೋದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನಲೆಯಲ್ಲಿ ಯಾರು ನಿವಾಸದತ್ತ ಸುಳಿಯುತ್ತಿಲ್ಲ ಅನ್ನೊ ಸುದ್ದಿ ಕೇಳಿ ಬರುತ್ತಿದೆ.
ಇದನ್ನೂ ಓದಿ : ಸಂತ್ರಸ್ತೆ ಹೇಳಿಕೆಯೇ ಪ್ರಜ್ವಲ್ಗೆ ಕಂಟಕ : ಬೆದರಿಸಿ ಅತ್ಯಾಚಾರ ಮಾಡಿದ ಆರೋಪ..!
Post Views: 221