Download Our App

Follow us

Home » ಅಪರಾಧ » ಪ್ರೇಮಿಗಳೆಂದು ತಿಳಿದು ಅಕ್ಕ-ತಮ್ಮನ ಮೇಲೆ ಹಲ್ಲೆ ಕೇಸ್​​ : 7 ಜನ ಆರೋಪಿಗಳು ಅರೆಸ್ಟ್..!

ಪ್ರೇಮಿಗಳೆಂದು ತಿಳಿದು ಅಕ್ಕ-ತಮ್ಮನ ಮೇಲೆ ಹಲ್ಲೆ ಕೇಸ್​​ : 7 ಜನ ಆರೋಪಿಗಳು ಅರೆಸ್ಟ್..!

ಬೆಳಗಾವಿ : ಪ್ರೇಮಿಗಳೆಂದು ತಿಳಿದು ಅಕ್ಕ-ತಮ್ಮನ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣ ಸಂಬಂಧ 7 ಜನ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಮಾರ್ಕೆಟ್ ಉಪವಿಭಾಗದ ಪೊಲೀಸರು ಆರೋಪಿಗಳನ್ನ ಅರೆಸ್ಟ್​ ಮಾಡಿದ್ದಾರೆ.

ಮಾರ್ಕೆಟ್ ಪೊಲೀಸರಿಂದ 17 ಜನರ ವಿರುದ್ಧ FIR ದಾಖಲಾಗಿದ್ದು, ಗಾಂಜಾ ನಶೆಯಲ್ಲಿದ್ದ 7 ಮುಸ್ಲಿಂ ಯುವಕರಿಂದ ಹಲ್ಲೆ ಶಂಕೆ ವ್ಯಕ್ತವಾಗಿದೆ. ನಾವು ಪ್ರೇಮಿಗಳಲ್ಲ ಅಂದ್ರು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

ಬೆಳಗಾವಿ ಕೋಟಿ ಕೆರೆಯ ದಡದಲ್ಲಿ ಅಕ್ಕ-ತಮ್ಮ ಕುಳಿತಿದ್ದರು. ಇವರಿಬ್ಬರನ್ನು ಶೆಡ್​ ಒಳಗೆ ಹಾಕಿ ದುಷ್ಕರ್ಮಿಗಳು ಥಳಿಸಿದ್ದಾರೆ. ಯುವನಿಧಿ ಅರ್ಜಿ ಸಲ್ಲಿಸಲು ಯುವತಿ ತಮ್ಮನ ಜೊತೆ ಬಂದಿದ್ದಳು. ಸರ್ವರ್​​​ ಸಮಸ್ಯೆಯಿಂದ ಮಧ್ಯಾಹ್ನ 3ಕ್ಕೆ ಬರುವಂತೆ ಸಿಬ್ಬಂದಿ ಹೇಳಿದ್ದಾರೆ. ಈ ಕಾರಣಕ್ಕೆ ಅಕ್ಕ-ತಮ್ಮ ಕೋಟೆ ಕೆರೆ ದಡದಲ್ಲಿ ಕುಳಿತಿದ್ದರು.

ಈ ವೇಳೆ ಅಲ್ಲಿಗೆ ಬಂದ ಕಿಡಿಗೇಡಿಗಳು ಮುಸ್ಲಿಂ ಹುಡುಗಿ ಜೊತೆಗೆ ಏಕೆ ಕುಳಿತಿದ್ದೀಯಾ? ಎಂದು ಯುವಕನ ಜೊತೆಗೆ ಜಗಳ ತೆಗೆದಿದ್ದಾರೆ. ಈ ವೇಳೆ ನಾವು ಪ್ರೇಮಿಗಳಲ್ಲ, ಅಕ್ಕ-ತಮ್ಮ ಎಂದು ಮನವರಿಕೆ ಮಾಡಲು ಯತ್ನಿಸಿದ್ದಾರೆ.

ಅಲ್ಲದೇ ಅವರ ಚಿಕ್ಕಪ್ಪನಿಗೆ ಫೋನ್ ಮಾಡಿ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಫೋನ್ ಸ್ವಿಚ್ ಆಫ್ ಮಾಡಿ ಕೋಟೆ ಕೆರೆ ಪಕ್ಕದ ಶೆಡ್‍ಗೆ ಎಳೆದೊಯ್ದ ಕೂಡಿ ಹಾಕಿ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಕಿರುಚಾಟದ ಶಬ್ದ ಕೇಳಿ ಸಚಿನ್​ನ​​ ಚಿಕ್ಕಪ್ಪ ಶೆಡ್​ ಒಳಗೆ ನುಗ್ಗಿದ್ದು, ಇಬ್ಬರನ್ನು ರಕ್ಷಿಸಿ ಚಿಕ್ಕಪ್ಪ ವಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಮನಾಪುರದ ಸಚಿನ್ ಹಾಗೂ ಆಕೆಯ ಅಕ್ಕನ ಮೇಲೆ ಹಲ್ಲೆ ನಡೆದಿದೆ. ಮಾರ್ಕೆಟ್​ ಪೊಲೀಸ್​​ ಠಾಣೆಗೆ ವಾಲಪ್ಪ ದೂರು ನೀಡಿದ್ದಾರೆ.

ಇದನ್ನೂ ಓದಿ : ಬೆಳಗಾವಿ : ಕುಡಿದ ಅಮಲಿನಲ್ಲಿ ಮಹಿಳೆಗೆ ಬಸ್​ ಡಿಕ್ಕಿ ಹೊಡೆದ ಚಾಲಕ.. ಕಂಡಕ್ಟರನ್ನೇ ಬಿಟ್ಟು ಎಸ್ಕೇಪ್..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here