ಸ್ಕೂಲ್​ ಛಾವಣಿ ಬಿದ್ದಿದೆ.. ಪಾಠ ಮಾಡೋಕೆ ಮೇಸ್ಟ್ರಿಲ್ಲಾ – ಬಾಲಕಿ ಪ್ರಶ್ನೆಗೆ ಸ್ಥಳದಲ್ಲೇ ಪರಿಹಾರ ನೀಡಿದ ಶಾಸಕ ರವಿಕುಮಾರ್​ ಗೌಡ!

ಮಂಡ್ಯ : ಆಲಕೆರೆ ಗ್ರಾಮದಲ್ಲಿ 24ವರ್ಷಗಳ ನಂತರ ನಡೆಯುತ್ತಿರುವ ‘ಶ್ರೀ ವೀರಭದ್ರೇಶ್ವರ ಅಗ್ನಿ ಕೊಂಡೋತ್ಸವ’ದ ನಿಮಿತ್ತ ದೇವಾಲಯದ ಆವರಣದಲ್ಲಿ ಪೂರ್ವಬಾವಿ ಸಭೆ ನಡೆಸಿದ ಶಾಸಕ ರವಿಕುಮಾರ್ ​ಗೌಡ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದಾರೆ.

ಪೂರ್ವಬಾವಿ ಸಭೆ ನಡೆಸುವ ಸಂದರ್ಭದಲ್ಲಿ ಆಲಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ನಮನ ಎಂಬ ವಿದ್ಯಾರ್ಥಿನಿ ಶಾಲೆಯಲ್ಲಿ ಪಾಠ ಮಾಡೋಕೆ ಶಿಕ್ಷಕರ ಕೊರತೆ ಇದ್ದು, ನಿಯೋಜಿಸುವಂತೆ ಹಾಗೂ ಶಾಲೆಯ ಛಾವಣಿ ಶೀತಿಲಗೊಂಡಿದೆ ಸರಿಯಾದ ವ್ಯವಸ್ಥೆ ಆಗಬೇಕು, ಈ ಕುರಿತು ಸಚಿವ ಮದುಬಂಗಾರಪ್ಪನವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಶಾಸಕ ರವಿಕುಮಾರ್ ​ಗೌಡರ ಗಮನಕ್ಕೆ ತಂದಿದ್ದಾಳೆ.

ವಿದ್ಯಾರ್ಥಿನಿಯ ಮಾತು ಕೇಳಿ ಸ್ಪಂದಿಸಿದ ಶಾಸಕ ರವಿಕುಮಾರ್ ​ಗೌಡ ಅವರು, ಸ್ಥಳದಲ್ಲೇ 5 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿ ಶೀಘ್ರವೇ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪೋನ್​ ಕರೆ ಮಾಡಿ ಸೂಚಿಸಿದ್ದಾರೆ.

ಇನ್ನು ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಬಳಿಕ ಕೀಲಾರ-ಆಲಕೆರೆ ಸಂಪರ್ಕ ರಸ್ತೆ ಅಭಿವೃದ್ಧಿ, ಆಲಕೆರೆ ಗ್ರಾಮದ ಒಳಗಿನ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ, ದೇವಲಾಯಕ್ಕೆ ಬಣ್ಣ ಬಳಿಸುವುದಾಗಿ ರವಿಕುಮಾರ್ ​ಗೌಡ ಅವರು ಭರವಸೆ ನೀಡಿದ್ದಾರೆ.

‘ಶ್ರೀ ವೀರಭದ್ರೇಶ್ವರ ಅಗ್ನಿ ಕೊಂಡೋತ್ಸವ’ದ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದವರಿಂದ ಹೆಚ್ಚಿನ ಬಸ್ ವ್ಯವಸ್ಥೆ, ದೇವಾಲಯದ ಹತ್ತಿರ ಶಾಶ್ವತ ಶೌಚಾಲಯ ನಿರ್ಮಾಣ, ತಾತ್ಕಾಲಿಕ ಆಸ್ಪತ್ರೆ, ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವುದಾಗಿ ಶಾಸಕ ರವಿಕುಮಾರ್ ​ಗೌಡ ಅವರು ತಿಳಿಸಿದ್ದಾರೆ.

Btv Kannada
Author: Btv Kannada

Leave a Comment

Read More