ಬಿಗ್ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿಯಿದೆ. ಈ ಹೊತ್ತಲ್ಲಿ ದೊಡ್ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಫೈನಲಿಸ್ಟ್ ಆಗಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ.
ಈ ಬಾರಿ ‘ಬಿಗ್ಬಾಸ್ಗೆ ಕಾಲಿಟ್ಟ ಪ್ರತಿಯೊಬ್ಬ ಸ್ಪರ್ಧಿ ಕೂಡ ದೊಡ್ಮನೆಯಲ್ಲಿ ಸದ್ದು ಮಾಡಿದ್ರು. ಆದ್ರೆ ಅನೇಕರನ್ನು ಎದುರು ಹಾಕಿಕೊಂಡ ಡೇರಿಂಗ್ ಗರ್ಲ್, ನಾನು ಯಾರಿಗೂ ಹೆದರವುದಿಲ್ಲ ಅನ್ನೋದನ್ನ ತನ್ನ ಆಟದ ಮೂಲಕವೇ ತೋರಿಸಿಕೊಟ್ಟಿದ್ದ ಚೈತ್ರಾ ಕುಂದಾಪುರ ಅವರು ಈ ವಾರ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗ್ತಿದೆ.
ಹೌದು.. ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಈ ವಾರ ಬಿಗ್ಬಾಸ್ ಮನೆಯ ಜರ್ನಿ ಮುಗಿಸಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮನೆಯ ಸ್ಪರ್ಧಿಗಳೆಲ್ಲ ಇವರನ್ನೇ ಪದೇ ಪದೇ ಟಾರ್ಗೆಟ್ ಮಾಡಿದ್ರೂ ಕುಗ್ಗದ ಚೈತ್ರಾ, ಫೈರ್ ಬ್ರ್ಯಾಂಡ್ ಈಸ್ ಬ್ಯಾಕ್ ಎನ್ನುತ್ತಲೇ ದೊಡ್ಮನೆಯಲ್ಲಿ ಅಬ್ಬರ ಆಟ ಆಡ್ತಿದ್ದರು.
ಬಿಗ್ಬಾಸ್ ಸೀಸನ್ 11ರಲ್ಲಿ ಅತಿ ಹೆಚ್ಚು ಕಳಪೆ ಬೋರ್ಡ್ ಪಡೆದು ಅನೇಕ ಬಾರಿ ಜೈಲು ಸೇರಿದ್ದ ಚೈತ್ರಾ, ನಾನು ಕಳಪೆ ಅಲ್ಲ ಅಂತ ಸಾಬೀತು ಪಡಿಸಿಕೊಳ್ಳಲು ಸ್ಟ್ರಾಂಗ್ ಆಗಿಯೇ ಟಾಸ್ಕ್ ಆಡ್ತಿದ್ದರು. ಇನ್ನು ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯೊಳಗೆ ಆಟ ಹಾಗೂ ಆವೇಷದ ಮಾತುಗಳನ್ನು ಹೊರತುಪಡಿಸಿ ಮನರಂಜನೆಯನ್ನು ಸಹ ನೀಡಿ ಪ್ರೇಕ್ಷಕರ ಹೃದಯ ಗೆದ್ದಿದ್ದರು.
ಆದ್ರೀಗ ಫಿನಾಲೆಗೆ ಕೆಲ ದಿನಗಳು ಬಾಕಿ ಇರುವಾಗ್ಲೆ ಚೈತ್ರಾ ಕುಂದಾಪುರ ಆಟ ನಿಲ್ಲಿಸಿ ದೊಡ್ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಈ ಸುದ್ದಿ ಅವರ ಅಭಿಮಾನಿಗಳಿಗೂ ಬೇಸರ ತರಿಸಿದೆ. ಮೋಕ್ಷಿತಾ, ಧನರಾಜ್ ಹಾಗೂ ಚೈತ್ರಾ ಮೂವರಲ್ಲಿ ಮೊದಲಿಗೆ ಮೋಕ್ಷಿತಾ ಸೇವ್ ಆಗಿದ್ದು, ಬಳಿಕ ಧನರಾಜ್-ಚೈತ್ರಾ ನಡುವೆ ಕಡಿಮೆ ವೋಟ್ ಪಡೆದ ಹಿನ್ನೆಲೆ ಚೈತ್ರಾ ದೊಡ್ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಇಂದು ರಾತ್ರಿ ಪ್ರಸಾರವಾಗುವ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಯಾರು ಎಲಿಮಿನೇಟ್ ಎಂಬ ಬಗ್ಗೆ ಅಧಿಕೃತವಾಗಿ ಹೇಳಲಿದ್ದಾರೆ.
ಇದನ್ನೂ ಓದಿ : ಸಿ.ಟಿ ರವಿ ಕೇಸ್ CIDಗೆ ಕೊಟ್ಟಿದ್ಯಾಕೆ? – ಸರ್ಕಾರದ ಕ್ರಮಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ!