Download Our App

Follow us

Home » ಜಿಲ್ಲೆ » ಹಾಸನಾಂಬೆ ದರ್ಶನಕ್ಕೆ ಮುಗಿಬಿದ್ದ ಭಕ್ತರು – ಜನರ ನಿಯಂತ್ರಣಕ್ಕೆ ಪಾಸ್‌ ಮಾರಾಟ ರದ್ದು..!

ಹಾಸನಾಂಬೆ ದರ್ಶನಕ್ಕೆ ಮುಗಿಬಿದ್ದ ಭಕ್ತರು – ಜನರ ನಿಯಂತ್ರಣಕ್ಕೆ ಪಾಸ್‌ ಮಾರಾಟ ರದ್ದು..!

ಹಾಸನ : ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಜನರ ನಿಯಂತ್ರಣಕ್ಕೆ ಪರದಾಡುವಂತಾಗಿದೆ. ಜನರನ್ನು ನಿಯಂತ್ರಿಸಲು 1,000 ರೂ.ನ ನೇರ ದರ್ಶನದ ಟಿಕೆಟ್ ಮಾರಾಟ ರದ್ದು ಮಾಡಲಾಗಿದೆ.

ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನ ಪಡೆಯಲು ದೇಶ, ವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎರಡೂವರೆ ಲಕ್ಷ ಪಾಸ್​ ಹಂಚಿದೆ. ಅಷ್ಟೇ ಅಲ್ಲದೆ VIP ಪಾಸ್​ ಜೊತೆಗೆ ಎಂಟ್ರಿ ಟಿಕೆಟ್​ ಕೂಡ ನೀಡಿದೆ. ಆದರೆ ಹಾಸನಾಂಬೆ ದರ್ಶನಕ್ಕೆ ಸಾವಿರಾರು ರೂಪಾಯಿ ಕೊಟ್ಟು ಬಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ಸುಡು ಬಿಸಿಲಲ್ಲಿ ಬಳಲಿ ಬೆಂಡಾದರು. ಇನ್ನು VIPಗಳ ಆಡಂಬೋಲ ಕಂಡು ಜನರ ರೌದ್ರಾವತಾರ ತಾಳಿದ್ದಾರೆ.

ಇನ್ನು ಲಕ್ಷಾಂತರ ಪಾಸ್​ ಕೊಟ್ಟಿದ್ದರಿಂದ ಹಾಸನಾಂಬೆ ದೇಗುಲದಲ್ಲಿ ಅವಾಂತರ ಸೃಷ್ಠಿಯಾಗಿದೆ. ರಾತ್ರಿ-ಹಗಲು ಕಾದರು ಜನಸಾಮಾನ್ಯರಿಗೆ ದರ್ಶನವಿಲ್ಲ ಕಾರಣ ಭಕ್ತರು ಬ್ಯಾರಿಕೇಡ್​ ಕಿತ್ತೆಸೆದು ಒಳನುಗ್ಗಿದ್ದಾರೆ.

ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ, 300, 1,000 ಟಿಕೆಟ್​ ಎಂಟ್ರಿ ರದ್ದುಗೊಳಿಸಿದೆ. ಅಷ್ಟೇ ಅಲ್ಲದೆ, ಹಾಸನ ಸುತ್ತಮುತ್ತಲ ಪ್ರದೇಶಗಳಿಂದ 500 ಬಸ್​​ ರದ್ದುಗೊಳಿಸಲಾಗಿದೆ. ರೇವಣ್ಣ ಕೂಡ ಖುದ್ದು ಟಿಕೆಟ್​ ಖರೀದಿಸಿ ಹಾಸನಾಂಬೆ ದರ್ಶನ ಪಡೆಯಲು ಕ್ಯೂ ನಿಂತಿದ್ದಾರೆ. ಇನ್ನು ಸರಿಯಾಗಿ ವ್ಯವಸ್ಥೆ ಮಾಡದ ಜಿಲ್ಲಾಡಳಿತಕ್ಕೆ ಜನರು ಹಿಡಿಶಾಪ ಹಾಕಿದ್ದಾರೆ.

ಇದನ್ನೂ ಓದಿ : ದರ್ಶನ್‌ ರಿಲೀಸ್​​ ಆಗಿದ್ಕೆ ಈ ಜೀವಕ್ಕೆ ಮಾತ್ರ ಎಲ್ಲಿಲ್ಲದ ನೋವು..!

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here