Download Our App

Follow us

Home » ಸಿನಿಮಾ » ಡಿಸಿಎಂ ಡಿ.ಕೆ ಶಿವಕುಮಾರ್​ನ್ನು ಭೇಟಿಯಾದ ದರ್ಶನ್​​ ಪತ್ನಿ ವಿಜಯಲಕ್ಷ್ಮಿ..!

ಡಿಸಿಎಂ ಡಿ.ಕೆ ಶಿವಕುಮಾರ್​ನ್ನು ಭೇಟಿಯಾದ ದರ್ಶನ್​​ ಪತ್ನಿ ವಿಜಯಲಕ್ಷ್ಮಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿದ್ದರು ನಟ ದರ್ಶನ್ ಅವರ ಬಿಡುಗಡೆಗೆ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟವನ್ನ ನಡೆಸುತ್ತಿದ್ದಾರೆ. ಇದೀಗ ವಿಜಯಲಕ್ಷ್ಮೀ ಅವರು ಡಿಸಿಎಂ ಡಿ ಕೆ ಶಿವಕುಮಾರ್​​ನ್ನು ಭೇಟಿ ಮಾಡಿದ್ದಾರೆ.

ಡಿಕೆಶಿ ಭೇಟಿ ವೇಳೆ ವಿಜಯಲಕ್ಷ್ಮೀಗೆ ದರ್ಶನ್ ಸಹೋದರ ದಿನಕರ್ ಸಾಥ್ ನೀಡಿದ್ದು, ನಿರ್ದೇಶಕ, ನಟ ಪ್ರೇಮ್​ ಕೂಡಾ ಈ ವೇಳೆ ಹಾಜರಾಗಿದ್ದರು. ದರ್ಶನ್​​ ಕುರಿತ ಎಲ್ಲ ಘಟನೆಗಳನ್ನು ವಿಜಯಲಕ್ಷ್ಮಿ ಡಿಕೆಶಿಗೆ ವಿವರಿಸಲಿದ್ದಾರೆ. ಈ ವಿಚಾರದ ಕುರಿತು ವಿಜಯಲಕ್ಷ್ಮೀ ಅವರು ಇಂದು ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಯಲಹಂಕ ಸಬ್​ರಿಜಿಸ್ಟ್ರಾರ್​​ ಕಚೇರಿಯಲ್ಲಿ ಹಗಲು ಲೂಟಿ, ತಿಂಗಳಿಗೆ 25 ಕೋಟಿ ಕಲೆಕ್ಷನ್ – ಇದು BTVಯ ಸ್ಫೋಟಕ ಸುದ್ದಿ..!

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here