Download Our App

Follow us

Home » ರಾಜಕೀಯ » ಸಿ.ಟಿ ರವಿ ಪ್ರಕರಣ ಬೆಂಗಳೂರು ಕೋರ್ಟ್​ಗೆ ಶಿಫ್ಟ್ ​- ಬೆಳಗಾವಿಯ JMFC ಕೋರ್ಟ್​ನಿಂದ ಆದೇಶ!

ಸಿ.ಟಿ ರವಿ ಪ್ರಕರಣ ಬೆಂಗಳೂರು ಕೋರ್ಟ್​ಗೆ ಶಿಫ್ಟ್ ​- ಬೆಳಗಾವಿಯ JMFC ಕೋರ್ಟ್​ನಿಂದ ಆದೇಶ!

ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್​ಸಿ ಸಿ.ಟಿ ರವಿ ಅವರನ್ನು ಪೊಲೀಸರು ಇಂದು ಬೆಳಗಾವಿ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿದರು. ಸಿ.ಟಿ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾ ಅವರು, ಸಿ.ಟಿ.ರವಿ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾವಣೆ​ ಮಾಡಿ ಆದೇಶಿಸಿದ್ದಾರೆ.

ಸಿ.ಟಿ.ರವಿ ಅವರನ್ನು ಬೆಳಗಾವಿಯಿಂದ ಗೌರವಯುತವಾಗಿ ಕರೆತರಲು ಕೋರ್ಟ್​ ಸೂಚನೆ ನೀಡಿದೆ. ಜೊತೆಗೆ​ ಟ್ರಾನ್ಸಿಟ್​ ವಾರೆಂಟ್​ ಕೊಟ್ಟಿದ್ದು, 24 ಗಂಟೆಯೊಳಗೆ ಬೆಂಗಳೂರು ಕೋರ್ಟ್​ಗೆ ಸಿ.ಟಿ.ರವಿ ಅವರನ್ನು ಹಾಜರು ಪಡಿಸಲು ಆದೇಶಿಸಿದೆ. ಈ ಆದೇಶದ ಬೆನ್ನಲ್ಲೇ ಬೆಳಗಾವಿಯಿಂದ ಸಿ.ಟಿ.ರವಿ ಅವರನ್ನು ಬೆಂಗಳೂರಿಗೆ ಕರೆತರಲು ಪೊಲೀಸರು ಸಿದ್ದತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್​​ ನಿನಗೊಂದು ಗತಿ ಕಾಣಿಸ್ತೀವಿ ಎಂದಿದ್ರು – ಜಡ್ಜ್ ಮುಂದೆ ಸಿ.ಟಿ ರವಿ ಗಂಭೀರ ಆರೋಪ!

 

 

 

Leave a Comment

DG Ad

RELATED LATEST NEWS

Top Headlines

ಹಸು ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕರಿಗೆ 3 ಲಕ್ಷ ರೂ. ಮೌಲ್ಯದ 3 ಹಸು ನೀಡಿದ ಸಚಿವ ಜಮೀರ್ ಅಹ್ಮದ್..!

ಬೆಂಗಳೂರು : ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಾನುವಾರುಗಳ ಮಾಲೀಕರಿಗೆ ಇಂದು ಮೂರು ಹಸುಗಳನ್ನು ನೀಡಿದ್ದಾರೆ. ಗಾಯಗೊಂಡಿದ್ದ

Live Cricket

Add Your Heading Text Here