Download Our App

Follow us

Home » ಸಿನಿಮಾ » ‘ಆಡ್ತೀನೋ, ಸಾಯ್ತಿನೋ’.. ಗೆಳೆಯ ಮಂಜಣ್ಣನ ವಿರುದ್ಧ ಗೌತಮಿ ಫುಲ್​​ ಗರಂ..!

‘ಆಡ್ತೀನೋ, ಸಾಯ್ತಿನೋ’.. ಗೆಳೆಯ ಮಂಜಣ್ಣನ ವಿರುದ್ಧ ಗೌತಮಿ ಫುಲ್​​ ಗರಂ..!

ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರುವಾಗಿ 10 ವಾರಗಳು ಉರುಳಿವೆ. 11ನೇ ವಾರ ಚಾಲ್ತಿಯಲ್ಲಿದೆ. ಈವರೆಗೂ ಇಷ್ಟು ವಾರಗಳ ಕಾಲ ಉಗ್ರಂ ಮಂಜು – ಗೌತಮಿ ಜಾಧವ್ ಮಧ್ಯೆ ಆತ್ಮೀಯತೆ, ಗೆಳೆತನ ಇತ್ತು. ಆದರೆ, ಅದ್ಯಾವಾಗ ಗೌತಮಿ ಜಾಧವ್‌ ಕ್ಯಾಪ್ಟನ್ ಆದ್ರೋ ಮಂಜು – ಗೌತಮಿ ಗೆಳೆತನದಲ್ಲಿ ಬಿರುಕು ಮೂಡಿದೆ.

ಹೌದು, ಎರಡು ತಂಡವಾಗಿ ವಿಂಗಡನೆಯಾದ ಸ್ಪರ್ಧಿಗಳಿಗೆ ಬಿಗ್​ಬಾಸ್​ ಟಾಸ್ಕ್​ವೊಂದನ್ನು ಕೊಟ್ಟಿದ್ದಾರೆ. ಇದೀಗ ರಿಲೀಸ್​​ ಆದ ಪ್ರೋಮೋದಲ್ಲಿ, ಸ್ಪರ್ಧಿಗಳಿಗೆ ಚೆಂಡು ಅಡೆತಡೆಗಳನ್ನು ದಾಟಿ ಅಲ್ಲಿರುವ ಬುಟ್ಟಿಗ ಬಂದು ಬೀಳಬೇಕಾಗಿತ್ತು.

ಇದೇ ಟಾಸ್ಕ್​ನಲ್ಲಿ ಗೌತಮಿ, ಐಶ್ವರ್ಯಾ ಆಡುತ್ತಿದ್ದರು. ಆಗ ಉಗ್ರಂ ಮಂಜು ಅವರ ಏಕಾಗ್ರತೆಯನ್ನು ಹಾಳು ಮಾಡಲು ಹಾಡು ಹಾಡಿದ್ದಾರೆ. ಆಗ ಶಿಶಿರ್ ಮಂಜಣ್ಣ ಸ್ಪಲ್ಪ ಸುಮ್ನೆ ಇರಿ ಅಂತ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಮಂಜು ಕಿರುಚಾಡಿದ್ದಾರೆ.

ಆಗ ಗೌತಮಿ ಗೆಳೆಯ ಮಂಜು ವಿರುದ್ಧ ಗುಡುಗಿದ್ದಾರೆ. ಆಡ್ತೀನೋ, ಸಾಯ್ತಿನೋ ದಯವಿಟ್ಟು ನನ್ನ ಕಡೆ ತಿರುಗಬೇಡಿ, ನೀವು ಮಾಡುವ ತಪ್ಪಿಗೆ ನನಗೆ ಬಹಳಷ್ಟು ತೊಂದರೆಯಾಗಿದೆ ಅಂತ ಹೇಳಿದ್ದಾರೆ. ಇದಾದ ಬಳಿಕ ಮತ್ತೆ ಬೆಡ್​ರೂಮ್​ನಲ್ಲಿ ಗಲಾಟೆ ಮಾಡಿಕೊಂಡು ಮಂಜು ಅವರ ಮೇಲೆ ಗೌತಮಿ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಅಂತಿಮ ಹಂತದ ಚಿತ್ರೀಕರಣದಲ್ಲಿ ಗುರುನಂದನ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರ..!

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here