ಆನೇಕಲ್ : ಇಲ್ಲಿನ ಹುಸ್ಕೂರು ಬಳಿಯ ಹಾರೊಹಳ್ಳಿಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಬೈಕ್ ಸಮೇತ ತಂದೆ-ಮಗಳು ಕೆರೆಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮಗಳು ಸಹನ (20) ಸಾವನ್ನಪ್ಪಿದ್ದಾಳೆ. ತಂದೆ ರಾಮಮೂರ್ತಿ ಈಜಿ ದಡ ಸೇರಿದ್ದಾರೆ.
ಇದೀಗ ಸಹನ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿಕೊಂಡಿದ್ದು, ಮಗಳ ಪ್ರೀತಿ ವಿಚಾರಕ್ಕೆ ತಂದೆಯೇ ಟಿವಿಎಸ್ ಬೈಕ್ ಸಮೇತ ಕೆರೆಗೆ ಬಿದ್ರಾ ಎಂಬೆಲ್ಲ ಮಾತುಗಳು ಸ್ಥಳೀಯ ವಲಯದಲ್ಲಿ ಕೇಳಿಬರುತ್ತಿದೆ. ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಮಗಳ ಸಮೇತ ತಂದೆ ತನ್ನ ಬೈಕ್ ಜೊತೆ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಹೌದು.. ನಿಖಿಲ್ ಎಂಬ ಯುವಕನನ್ನು ಸಹನ ಪ್ರೀತಿಸುತ್ತಿದ್ದಳು. ಪ್ರೀತಿ ವಿಚಾರ ಎರಡು ಮನೆಗಳಲ್ಲಿ ತಿಳಿದ ಹಿನ್ನೆಲೆ ಸಹನಗೆ ತಂದೆ ರಾಮಮೂರ್ತಿ ಬೇರೆ ಮದುವೆ ಮಾಡಲು ಮುಂದಾಗಿದ್ದರು.
ತನ್ನ ಅಕ್ಕನ ಮಗನೊಂದಿಗೆಯೇ ಸಹನಗೆ ಮದುವೆ ಮಾಡುಲು ಮುಂದಾಗಿದ್ದ ರಾಮಮೂರ್ತಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ಹುಸ್ಕೂರಿನ ಸ್ನೇಹಿತರ ಮನೆಯಲ್ಲಿ ಪಂಚಾಯಿತಿ ನಡೆಸಿದ್ದ. ಅಲ್ಲಿಯೂ ಕೂಡ ತಾನೂ ಪ್ರೀತಿಸಿದವನನ್ನೇ ಮದುವೆಯಾಗುತ್ತೆನೆಂದು ಸಹನ ಹೇಳಿದ್ದಿಳು.
ಪಂಚಾಯಿತಿ ಮುಗಿಸಿಕೊಂಡು ಮಗಳು ಸಹನಳಾನ್ನು ಊರಿಗೆ ಕರೆದುಕೊಂಡು ಹೋಗುವಾಗ ಕೆರೆಯ ಏರಿ ಮೇಲಿಂದ ಬೈಕ್, ಮಗಳ ಸಮೇತ ನೀರಿಗೆ ತಂದೆ ರಾಮಮೂರ್ತಿ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗಿ ಮಗಳು ಸಾವನ್ನಪ್ಪಿದ ಮೇಲೆ ಸೀದ ಹೆಬ್ಬಗೋಡಿ ಪೊಲೀಸ್ ಠಾಣೆಗೆ ರಾಮಮೂರ್ತಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.
ಹೆಬ್ಬಗೋಡಿ ಠಾಣೆಯಲ್ಲಿ ರಾಮಮೂರ್ತಿಯ ನಡೆ ಕಂಡ ಅನುಮಾನಗೊಂಡ ಪೊಲೀಸರು, ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
