ಪೊಲೀಸರಿಗೆ ಮೋಸ್ಟ್​ ವಾಂಟೆಡ್ ಆದ KSCA, RCB, DNA ಆಡಳಿತ – ಅರೆಸ್ಟ್ ಆದೇಶ ಬರ್ತಿದ್ದಂತೆ ಪ್ರಭಾವಿಗಳು ಎಸ್ಕೇಪ್!​

ಬೆಂಗಳೂರು : ಆರ್​ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಲ್ಲಿ ಆರ್​ಸಿಬಿ ಮಾರ್ಕೆಟಿಂಗ್​ ಹೆಡ್​​​​​​​​​ ನಿಖಿಲ್ ಸೋಸಲೆ ಸೇರಿದಂತೆ DNA ಇವೆಂಟ್ ಮ್ಯಾನೇಜ್ಮೆಂಟ್ ಸಿಬ್ಬಂದಿಗಳಾದ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್​ ಎಂಬವರನ್ನು ಸಿಸಿಬಿ ಪೊಲೀಸರು ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತೀವ್ರತರದ ವಿಚಾರಣೆಗೆ ಒಳಪಡಿಸಲಾಗಿದೆ.

ಬಂಧಿತರು
ಬಂಧಿತರು

ಸದ್ಯ ಸಾರ್ವಜನಿಕ ವಲಯದಲ್ಲಿ ಕಾಲ್ತುಳಿತ ಘನಘೋರ ದುರಂತಕ್ಕೆ ಹೊಣೆ ಯಾರು? ಎಂಬ ಚರ್ಚೆಗಳು ನಡೆಯುತ್ತಿದ್ದು, ಕೂಡಲೇ ಈ ದುರಂತಕ್ಕೆ ಕಾರಣರಾವಾದ ಪ್ರಭಾವಿಗಳ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಹೌದು.. 11 ಜೀವ ಬಲಿ ಪಡೆದ RCB ಮ್ಯಾನೇಜ್ಮೆಂಟ್​ ಹೆಡ್​ ಅರೆಸ್ಟ್​ ಯಾವಾಗ? KSCA ಅಧ್ಯಕ್ಷ ರಘುರಾಮ್​ ಭಟ್​, ಕಾರ್ಯದರ್ಶಿ ಶಂಕರ್ ಅವರನ್ನೂ ಅರೆಸ್ಟ್ ಮಾಡ್ಬೇಕು.. KSCA ಖಜಾಂಚಿ ಜಯರಾಮ್​ ಬಂಧನ ಮಾಡಬೇಕೆಂಬ ಆಗ್ರಹಗಳು ಕೇಳಿಬಂದಿದೆ. ಹಾಗೆಯೇ DNA ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥಾಪಕ ಟಿ. ವೆಂಕಟ್ ವರದನ್​ ಅವರನ್ನೂ ಕೂಡಲೇ ಬಂಧಿಸಕೇಂದು ಆಗ್ರಹಿಸಲಾಗಿದೆ.

KSCA ಕಾರ್ಯದರ್ಶಿ ಶಂಕರ್
KSCA ಕಾರ್ಯದರ್ಶಿ ಶಂಕರ್
KSCA ಅಧ್ಯಕ್ಷ ರಘುರಾಮ್​ ಭಟ್
KSCA ಅಧ್ಯಕ್ಷ ರಘುರಾಮ್​ ಭಟ್

ಇದೀಗ ಈ ವಿಚಾರ ತಿಳಿಯುತ್ತಿದ್ದಂತೆ KSCA ಅಧ್ಯಕ್ಷ ರಘುರಾಮ್​ ಭಟ್​, ಕಾರ್ಯದರ್ಶಿ ಶಂಕರ್,  DNA-ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥಾಪಕ ವೆಂಕಟ್ ವರದನ್, KSCA ಖಜಾಂಚಿ ಜಯರಾಮ್ ಬೆಂಗಳೂರಿನಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು RCB, KSCA, DNA ಆಡಳಿತ ಚಿನ್ನಸ್ವಾಮಿ ಸ್ಟೇಡಿಯಂ ಅನ್ನೇ ದಂಧೆಯನ್ನಾಗಿಸಿರುವ ಸ್ಫೋಟಕ ಅಂಶವು ಕೂಡ ಹೊರಬಿದ್ದಿದೆ.

DNA-ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥಾಪಕ ವೆಂಕಟ್ ವರದನ್
DNA ಸಂಸ್ಥಾಪಕ ವೆಂಕಟ್ ವರದನ್
KSCA ಖಜಾಂಚಿ ಜಯರಾಮ್
KSCA ಖಜಾಂಚಿ ಜಯರಾಮ್

ಇದನ್ನೂ ಓದಿ : ಕಾಲ್ತುಳಿತ ಕೇಸ್​​ನಲ್ಲಿ MLC ಗೋವಿಂದರಾಜ್​ ಪಾತ್ರ ರಿವೀಲ್​ – ಯಾವುದೇ ಕ್ಷಣದಲ್ಲಿ ಅರೆಸ್ಟ್​​?

Btv Kannada
Author: Btv Kannada

Read More