ಪೌರ ಕಾರ್ಮಿಕನಿಗೆ ಜಾತಿ ನಿಂದನೆ, ಕೊಲೆ ಬೆದರಿಕೆ – FIR ಆದ್ರೂ ಬಿಜೆಪಿ ಮುಖಂಡ NR ರಮೇಶ್ ಬಂಧನ ಯಾಕಿಲ್ಲ?

ಬೆಂಗಳೂರು : ಪೌರ ಕಾರ್ಮಿಕನಿಗೆ ಜಾತಿ ನಿಂದನೆ, ಕೊಲೆ ಬೆದರಿಕೆಯೊಡ್ಡಿದ ಬಿಜೆಪಿ ಮುಖಂಡ NR ರಮೇಶ್​ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಈ ಪ್ರಕರಣ ಸಂಬಂಧ SC/ST ಆ್ಯಕ್ಟ್​​​ ಅಡಿ NR ರಮೇಶ್​ ವಿರುದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ FIR ದಾಖಲಾಗಿದ್ದರೂ ಸಹ NR ರಮೇಶ್​ರನ್ನು ಪೊಲೀಸರು ಇನ್ನೂ ಅರೆಸ್ಟ್​​ ಮಾಡಿಲ್ಲ.

ದಿನೇಶ್​ ಎಂಬ ಯುವಕನಿಗೆ NR ರಮೇಶ್​​ ಜಾತಿ ನಿಂದನೆ, ಕೊಲೆ ಬೆದರಿಕೆಯೊಡ್ಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ BNS ಸೆಕ್ಷನ್​​​ 115(2), 351(2), 352 & SC/ST ಆ್ಯಕ್ಟ್​​​​​ ಅಡಿ NR ರಮೇಶ್ ವಿರುದ್ದ ಪ್ರಕರಣ ದಾಖಲಾಗಿದೆ.

ಕಸ ವಿಲೇವಾರಿ ಟೆಂಡರ್​​ ಬಗ್ಗೆ NR ರಮೇಶ್ ಪೌರ ಕಾರ್ಮಿಕನಿಗೆ ಕೊಲೆ ​ಬೆದರಿಕೆ ಹಾಕಿದ್ದು, NR ರಮೇಶ್​​ ಗೂಂಡಾಗಿರಿ, ಜಾತಿ ನಿಂದನೆ ಬಗ್ಗೆ ಯುವಕ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ದೂರುದಾರ ದಿನೇಶ್ ಟೆಂಡರ್​ಗಾಗಿ ಜಗಳ ಮಾಡ್ತಿದ್ದ​ ವೇಣುಗೋಪಾಲ್​​​​​ ಹಾಗೂ ಮಂಜುನಾಥ್​​ ಜಗಳ ಬಿಡಿಸಲು ಹೋಗಿದ್ದ. ಆಗ ನಿನ್ನ ಮೇಲೆ ಕಳ್ಳತನ ಕೇಸ್ ಹಾಕಿಸುತ್ತೇನೆ ಎಂದು NR ರಮೇಶ್ ಬೆದರಿಕೆ ಹಾಕಿದ್ದಾರೆ.

ಬಡವ ಬಡವನಂತಿರು… ಕಾಲು ಚಿಪ್ಪು ಒಡೆಸ್ತೀನಿ ಎಂದು NR ರಮೇಶ್​ ಬೆದರಿಸಿದ್ದು, ‘ಅವನನ್ನು ಎತ್ತಾಕ್ಕೊಂಡು ಬನ್ರೋ’ ಎಂದು ತನ್ನ ಸಹಚರರಿಗೆ ಎನ್.​ ಆರ್​ ರಮೇಶ್​ ಹೇಳಿದ್ದಾರೆ.

ಈ ಸಂಬಂಧ ಕಾಲ್​​ ರೆಕಾರ್ಡ್​ ಸಹಿತ ಎನ್.​ ಆರ್ ರಮೇಶ್​ ವಿರುದ್ದ ದಿನೇಶ್​ ದೂರು ನೀಡಿದ್ದಾನೆ. FIR ಆದ್ರೂ ಬಿಜೆಪಿ ಮುಖಂಡ NR ರಮೇಶ್​ರನ್ನು ಪೊಲೀಸರು ಇನ್ನು ಅರೆಸ್ಟ್​​ ಮಾಡಿಲ್ಲ. ಇದೀಗ  ಬಿಜೆಪಿ ಮುಖಂಡ NR ರಮೇಶ್​ ಬಂಧನ ಯಾಕಿಲ್ಲ? ರಾಜಕೀಯ ನಾಯಕರಿಗೊಂದು ಕಾನೂನು.. ಜನರಿಗೊಂದು ಕಾನೂನಾ? ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಇದನ್ನೂ ಓದಿ : ಭಾರತದ ಹೆಸರಾಂತ ವಾದ್ಯಗಾರರ ಸಾರಥ್ಯದಲ್ಲಿ’ಮಾರುತ’ ಚಿತ್ರದ ರೀ-ರೆಕಾರ್ಡಿಂಗ್​! 

Btv Kannada
Author: Btv Kannada

Read More