ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಂತಿಮ ತನಿಖಾ ವರದಿ ತಯಾರಿಸಿದ್ದು, ಇದರಲ್ಲಿನ ಸ್ಫೋಟಕ ಅಂಶಗಳು ಬಿಟಿವಿಗೆ ಲಭ್ಯವಾಗಿದೆ. ಅಂತಿಮ ತನಿಖಾ ವರದಿಯಲ್ಲಿ ಸಿಎಂ ಸಿದ್ದು ಫ್ಯಾಮಿಲಿಯೇ ಸಂತ್ರಸ್ತರು ಎಂದು ಲೋಕಾಯುಕ್ತ ಉಲ್ಲೇಖಿಸಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮುಡಾ ಮಾಜಿ ಆಯುಕ್ತ ನಟೇಶ್ ಅವರೇ ಎಲ್ಲದರ ಸೂತ್ರಧಾರ : ಮುಡಾದ ಮಾಜಿ ಆಯುಕ್ತ ನಟೇಶ್ ಈ ಪ್ರಕರಣ ಪ್ರಮುಖ ಆರೋಪಿ. ನಟೇಶ್ ಅವರೇ ಎಲ್ಲದರ ಸೂತ್ರಧಾರ. ಸಿಎಂ ಪತ್ನಿ ಪಾರ್ವತಿ ಗಮನಕ್ಕೆ ಬಾರದೆ ಎಲ್ಲಾ ವ್ಯವಹಾರ ನಡೆದಿದೆ. ಭೂ ಮಾಲೀಕ ಎನ್ನಲಾದ ದೇವರಾಜು ಭೂಮಿ ಮಾರುವಾಗ ಸಾಕಷ್ಟು ಮಾಹಿತಿ ಮುಚ್ಚಿಟ್ಟಿದ್ರು. ಭೂಮಿಯನ್ನು ಮುಡಾ ವಶಕ್ಕೆ ಪಡೆದಿದ್ದ ಮಾಹಿತಿಯನ್ನೂ ಮುಚ್ಚಿಟ್ಟಿದ್ರು. ಈ ವಿಷಯ ತಿಳಿಯದೇ ಮಲ್ಲಿಕಾರ್ಜುನ್ ದೇವರಾಜು ಬಳಿಯಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಆದ್ರೆ ಅಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಸರ್ಕಾರದ ನಡಾವಳಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ವರದಿಯಲ್ಲಿನ ಸ್ಫೋಟಕ ಅಂಶಗಳೇನು?
- ಮುಡಾ ಮಾಜಿ ಆಯುಕ್ತ ನಟೇಶ್ ಪ್ರಮುಖ ಆರೋಪಿ
- ಭೂ ಮಾಲೀಕ ದೇವರಾಜು ಮಾಹಿತಿ ಮುಚ್ಚಿಟ್ಟು ಜಮೀನು ಮಾರಾಟ
- ಭೂಮಿಯನ್ನು ಮುಡಾ ವಶಕ್ಕೆ ಪಡೆದಿದ್ದ ಮಾಹಿತಿ ಮರೆಮಾಚಿ ಮಾರಾಟ
- ಈ ವಿಷಯ ತಿಳಿಯದೆ ಮಲ್ಲಿಕಾರ್ಜುನ್ರಿಂದ ಜಮೀನು ಖರೀದಿ
- 2004ರಲ್ಲಿ ಜಮೀನು ಖರೀದಿ ಮಾಡುವಾಗ ಕಾನೂನು ತೊಡಕು ಇರಲಿಲ್ಲ
- 5, 95,000 ರೂ.ಗೆ 3.26 ಎಕ್ರೆ ಜಮೀನು ಖರೀದಿ ಮಅಡಿದ್ದಾರೆ
- ಜಮೀನು ಖರೀದಿ ವೇಳೆ ನೊಂದಣಿ ಶುಲ್ಕದಲ್ಲಿ ಮೋಸ ಮಾಡಿಲ್ಲ
- 2010 ರಲ್ಲಿ ಕೂಡ ದಾನ ಪತ್ರ ನೀಡುವಾಗ ಕೂಡ ಕಾನೂನಾತ್ಮವಾಗಿದೆ
- ಕೆಸರೆಯ ಜಮೀನನ್ನು ಮುಡಾ ವಶಕ್ಕೆ ಪಡೆಯುವಾಗ ನಿಯಮ ಪ್ರಕಾರವೇ ಇದೆ
- ಆದ್ರೆ 14 ಸೈಟುಗಳನ್ನ ಮರು ಹಂಚಿಕೆ ಮಾಡುವಾಗ ಕಾನೂನು ಮೀರಲಾಗಿದೆ
- ಸಿಎಂ ಮತ್ತು ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದಾರೆ
- ಸಿಎಂ ಅವರ ಪತ್ನಿ ಇದೇ ಜಾಗದಲ್ಲಿ ಸೈಟ್ ಬೇಕು ಅಂತ ಮನವಿ ಮಾಡಿಲ್ಲ
- ಮುಡಾ ಅಧಿಕಾರಿಗಳ ಜೊತೆ ನಡೆದಿರೋ ಪತ್ರ ವ್ಯವಹಾರದಲ್ಲಿ ಕೆಲವು ಲೋಪಗಳಿವೆ
- ಪಾರ್ವತಿ ಅವರ ಗಮನಕ್ಕೆ ಬಾರದಂತೆ ಕೆಲವು ಪತ್ರ ವ್ಯವಹಾರ ನಡೆದಿದೆ
- ಮುಡಾ ಆಯುಕ್ತರು ಮತ್ತು ಅಧಿಕಾರಿಗಳಿಂದ ನಡಾವಳಿಯ ದುರ್ಬಳಕೆ ಆಗಿದೆ
- 15 ಭೂಮಿ ಖರೀದಿಸುವಾಗ, ದಾನ ಮಾಡುವಾಗ ಸಿಎಂ ಯಾವುದೇ ಪ್ರಭಾವ ಬೀರಿಲ್ಲ
- ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಕ್ಕೆ ಸಾಕ್ಷಿ ಇಲ್ಲ
- ಪ್ರಭಾವ ಬೀರಿರುವ ಆರೋಪಕ್ಕೂ ಪ್ರತ್ಯಕ್ಷ, ಪರೋಕ್ಷ ಸಾಕ್ಷ್ಯಗಳಿಲ್ಲ
- ನಟೇಶ್ ಕೇವಲ 14 ಸೈಟ್ ಮಾತ್ರವಲ್ಲ ಹಲವು ಅಕ್ರಮಗಳನ್ನು ಮಾಡಿದ್ದಾರೆ
- 19 ನಟೇಶ್ ಸರ್ಕಾರದ ನಡಾವಳಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ರು
- ನಟೇಶ್ ಅವರ ಅಕ್ರಮಗಳ ಬಗ್ಗೆ ಮುಂದುವರಿದ ತನಿಖೆ ಆಗಬೇಕಿದೆ
