ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅತ್ಯಾಚಾರ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದಾರೆ. ಈ ಮಧ್ಯೆ ಸ್ಯಾಂಡಲ್ವುಡ್ನ ಸ್ಟಾರ್ ಹೀರೋಗಳ ಬಗ್ಗೆ ನೀಡಿರುವ ಕೀಳುಮಟ್ಟದ ಹೇಳಿಕೆಯ ಆಡಿಯೋ ವೈರಲ್ ಆಗಿದ್ದು, ಇದು ಮತ್ತಷ್ಟು ವಿವಾದಗಳಿಗೆ ಕಾರಣವಾಗಿದೆ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಅವರು ರೇಪಿಸ್ಟ್ ಮಡೆನೂರು ಮನು ಹೆಸರೇಳದೇ ಕ್ಯಾಕರಿಸಿ ಉಗಿದಿದ್ದಾರೆ.
ಮಡೆನೂರು ಮನು ಹೆಸರನ್ನು ಹೇಳದೆಯೇ ಟ್ವೀಟ್ ಮೂಲಕ ಪರೋಕ್ಷವಾಗಿ ನಟ ಜಗ್ಗೇಶ್ ಕಿಡಿ ಕಾರಿದ್ದಾರೆ. ಒಂದು ಗಾದೆ ಮಾತು ನೆನಪಾಯಿತು. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ. ಗುರು ಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲ. ಇಂದು ಇದ್ದದ್ದು ನಾಳೆ ಇರದು, ಅಹಂಕಾರ ಬಿಡಿ, ಅಂಬೆಗಾಲು ಇಡುತ್ತಿರುವ ಕೂಸುಗಳೇ. ಆಯುಷ್ಯ ಬರೆಯೋದು ಬ್ರಹ್ಮ ಚಿಲ್ಲರೆ ಮನುಷ್ಯರಲ್ಲಾ. ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವರಾಜ್ಕುಮಾರ ಚಿತ್ರರಂಗದ ಕಿರೀಟ ಇದ್ದಂತೆ. ಎಲ್ಲರನ್ನು ಪ್ರೀತಿಸುವ ಜೀವ. ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ, ನೀವು ಹಿಮಾಲಯ. ನಿಮಗೆ ಧೀರ್ಘಾಯುಷ್ಯ ಪ್ರಾಪ್ತಿ ಇದೆ. ನಿಮ್ಮ ಹೆತ್ತವರು, ಕನ್ನಡಿಗರ ಆಶೀರ್ವಾದ ಇದೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಮಡೆನೂರು ಮನು ವೈರಲ್ ಆಡಿಯೋದಲ್ಲಿ ಏನಿದೆ? ವೈರಲ್ ಆಗಿರುವ ಆಡಿಯೋದಲ್ಲಿ “ಶಿವರಾಜ್ಕುಮಾರ್ ಇನ್ನೊಂದು 6 ವರ್ಷ.. ಸತ್ತು ಹೋಗ್ತಾರೆ. ಧ್ರುವ ಸರ್ಜಾ ಇನ್ನೊಂದು 8 ವರ್ಷ, ಇನ್ನೊಂದು 6 ವರ್ಷ ದರ್ಶನ್ ಕ್ರೇಜ್ ಇರುತ್ತೆ, ಆದರೆ ಸಿನಿಮಾ ಓಡಲ್ಲ. ಈ ಮೂರು ಜನರ ಮಧ್ಯೆ ಕಾಂಪಿಟೇಶನ್ ಕೊಡೋಕೆ ನಿಂತಿರೋ ಗಂಡುಗಲಿ ನಾನು ಎಂಬ ಮಾತುಗಳನ್ನು ಮನು ಹೇಳಿದ್ದಾರೆ. ಮನು ಅವರದ್ದು ಎನ್ನಲಾದ ಈ ಆಡಿಯೋ ಈಗ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ : ಮುಂದಿನ 3 ಗಂಟೆ ಬಿರುಗಾಳಿ ಸಹಿತ ಭಾರೀ ಮಳೆ – ಈ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!

Author: Btv Kannada
Post Views: 383