ಸಮಂತಾಗೆ ಡಿವೋರ್ಸ್​ ನೀಡಲು ಶಾಕಿಂಗ್ ಕಾರಣ ಕೊಟ್ಟ ನಾಗಚೈತನ್ಯ!

ಟಾಲಿವುಡ್​ನ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ನಾಗಚೈತನ್ಯ ಹಾಗೂ ಸಮಂತಾ ರುತ್‌ ಪ್ರಭು ಅವರು ಡಿವೋರ್ಸ್‌ ಘೋಷಿಸುವ ಮೂಲಕ ಫ್ಯಾನ್ಸ್​​ಗೆ ಶಾಕ್‌ ಕೊಟ್ಟಿದ್ದರು. ಇತ್ತೀಚಿಗಷ್ಟೇ ನಾಗಚೈತನ್ಯ ಅವರು ಮತ್ತೊಬ್ಬ ನಟಿ ಶೋಭಿತಾ ಧುಲಿಪಾಲ ಜೊತೆ 2ನೇ ಮದುವೆ ಕೂಡ ಆಗಿದ್ದಾರೆ. ಡಿವೋರ್ಸ್​ ಬಗ್ಗೆ ಸಮಂತಾ ಆಗಾಗ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು.

ಆದರೆ ಮೊದಲ ಬಾರಿ ನಾಗಚೈತನ್ಯಾ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಮುಗಿದು ಹೋಗಿದೆ. ನಾವು ಬಹಳ ಯೋಚಿಸಿಯೇ ಡಿವೋರ್ಸ್ ನಿರ್ಧಾರ ತೆಗೆದುಕೊಂಡಿದ್ದೇವೆ. ಪದೇ ಪದೆ ಅದೇ ವಿಚಾರದ ಬಗ್ಗೆ ಚರ್ಚೆ ಯಾಕೆ? ನನ್ನ ದಾರಿ ನನಗೆ ಸಮಂತಾ ದಾರಿ ಆಕೆಯದ್ದು. ಸೋಶಿಯಲ್ ಮೀಡಿಯಾದಲ್ಲಿ ಸುಮ್ಮನೆ ನೆಗೆಟಿವ್ ಕಾಮೆಂಟ್ ಮಾಡುವುದು ಯಾಕೆ? ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ನಾಗಚೈತನ್ಯ ಗರಂ ಆಗಿದ್ದಾರೆ.

ಡಿವೋರ್ಸ್ ಬಳಿಕ ನಾನು ಸೋಶಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರೂ ನೆಗೆಟಿವ್ ಕಾಮೆಂಟ್ ಬರುತ್ತದೆ. ಅದನ್ನು ನಾನು ಕೂಡ ಓದುತ್ತೇನೆ. ನಾವಿಬ್ಬರು ಪರಸ್ಪರ ಒಪ್ಪಿ ಡಿವೋರ್ಸ್ ನಿರ್ಧಾರ ತೆಗೆದುಕೊಂಡೆವು. ಅದನ್ನು ಒಟ್ಟಿಗೆ ಪೋಸ್ಟ್ ಮಾಡಿ ಹಂಚಿಕೊಂಡಿದ್ದೆವು. ವೈಯಕ್ತಿಕ ಕಾರಣಕ್ಕೆ ಆ ನಿರ್ಣಯ ಕೈಗೊಂಡೆವು. ಈಗ ನಮ್ಮ ದಾರಿಯಲ್ಲಿ ನಾವು ಮುಂದುವರೆಯುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಕೊಂಡ ಪ್ರೈವೆಸಿ ಬೇಕು ಎಂದು ಕೂಡ ಮನವಿ ಮಾಡಿದ್ದೆವು. ಆದರೆ ನಮ್ಮ ಡಿವೋರ್ಸ್ ವಿಚಾರ ಕೆಲವರಿಗೆ ತಮಾಷೆ ಆಗಿಬಿಟ್ಟಿದೆ ಎಂದು ನಾಗಚೈತನ್ಯ ಬೇಸರ ಹೊರಹಾಕಿದ್ದಾರೆ.

“ನಮ್ಮ ಜೀವನದಲ್ಲಿ ನಡೆದಿದ್ದು ಸಾಕಷ್ಟು ಜನರ ಜೀವನದಲ್ಲಿ ನಡೆದಿದೆ. ನನ್ನನ್ನು ಮಾತ್ರ ಯಾಕೆ ಕ್ರಿಮಿನಲ್ ತರ ನೋಡುತ್ತಿದ್ದೀರಾ? ನನಗೂ ಈ ವಿಚಾರದ ಬಗ್ಗೆ ಬಹಳ ಸೂಕ್ಷ್ಮವಾಗಿ ಅರಿವಿದೆ. ಕಾರಣ ನಾನು ಕೂಡ ಒಡೆದ ಕುಟುಂಬದಿಂದ ಬಂದವನು. ಆ ಅನುಭವ ಎಂಥದ್ದು ಎಂದು ನನಗೂ ಗೊತ್ತು. ನಾನು ಡಿವೋರ್ಸ್ ಪಡೆಯುತ್ತೇನೆ ಎಂದರೆ ಎಷ್ಟು ಯೋಚಿಸಿರುತ್ತೇನೆ ಗೊತ್ತಲ್ವಾ?” ಎಂದು ನಾಗಚೈತನ್ಯ ವಿವರಿಸಿದ್ದಾರೆ.

ಪಾಪ ಶೋಭಿತಾಗೂ ಇದರಿಂದ ಬಹಳ ನೋವಾಯಿತು. ಕಾರಣ ಆಕೆಗೂ ನನ್ನ ಡಿವೋರ್ಸ್‌ಗೂ ಸಂಬಂಧವಿಲ್ಲ. ಇನ್‌ಸ್ಟಾಗ್ರಾಮ್ ಚಾಟ್ ಮೂಲಕ ನಮ್ಮಿಬ್ಬರ ಪರಿಚಯ, ಮಾತು ನಡೆದು ಪ್ರೀತಿ ಶುರುವಾಯಿತು. ಆಕೆ ಇದನ್ನೆಲ್ಲಾ ಅರ್ಥ ಮಾಡಿಕೊಂಡಳು, ಆಕೆಯ ಬಗ್ಗೆ ಬಹಳ ಗೌರವ ಇದೆ ಎಂದು ನಾಗಚೈತನ್ಯ ಹೇಳಿದ್ದಾರೆ.

ಇದನ್ನೂ ಓದಿ : http://ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್.. ನಾಳೆಯಿಂದ ನಮ್ಮ ಮೆಟ್ರೋ ದರ 46% ಏರಿಕೆ!

Btv Kannada
Author: Btv Kannada

Read More