ಬೆಳ್ಳಂಬೆಳಗ್ಗೆ ಗೃಹ ಸಚಿವ ಪರಮೇಶ್ವರ್​ಗೆ ED ಶಾಕ್​​ – ಪರಂ​ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ರೇಡ್!

ಬೆಂಗಳೂರು : ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು
ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು

ಬೆಳಗ್ಗೆ 9 ಗಂಟೆ ಸುಮಾರಿಗೆ ED ಅಧಿಕಾರಿಗಳು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ಸದ್ಯ ಎಲ್ಲಾ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಐಟಿ ನೀಡಿರುವ ಮಾಹಿತಿ ಆಧರಿಸಿ ED ಅಧಿಕಾರಿಗಳ ತಂಡ ಪರಮೇಶ್ವರ್​ ಒಡೆತನದ ಶಿಕ್ಷಣ ಸಂಸ್ಥೆಗಳ ದಾಳಿ ಮಾಡಿದೆ. ಒಟ್ಟು 30 ED ಅಧಿಕಾರಿಗಳು ದಾಳಿ ಮಾಡಿ, ಎಲ್ಲ ಬಾಗಿಲುಗಳನ್ನು ಕ್ಲೋಸ್ ಮಾಡಿಕೊಂಡು ಯಾರನ್ನೂ ಒಳಗೆ ಬಿಟ್ಟುಕೊಳ್ಳದೆ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್
ಗೃಹ ಸಚಿವ ಡಾ. ಜಿ ಪರಮೇಶ್ವರ್

ಕಾಲೇಜಿನ ಹಣಕಾಸು ವ್ಯವಹಾರಗಳು ಹಾಗೂ ಕಾಲೇಜು ದಾಖಲಾತಿಯಲ್ಲಿ ಏನಾದರೂ ವ್ಯತ್ಯಾಸ ಆಗಿರಬಹುದು ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ತಿಳಿದುಬಂದಿದೆ.

(SSIT) ಇಂಜಿನಿಯರಿಂಗ್ ಕಾಲೇಜು
(SSIT) ಇಂಜಿನಿಯರಿಂಗ್ ಕಾಲೇಜು

ED ದಾಳಿ ನಡೆಸಿರುವ ಸಂಸ್ಥೆಗಳು : ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್, (SSIT) ಇಂಜಿನಿಯರಿಂಗ್ ಕಾಲೇಜು, ಅಲ್ಲದೇ ನೆಲಮಂಗಲದ ಟಿ. ಬೇಗೂರು ಬಳಿ ಇರುವ ಮೆಡಿಕಲ್​ ಕಾಲೇಜಿನ ಮೇಲೆ ED ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.. 9 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿ ಸದ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಟಿ. ಬೇಗೂರು ಮೆಡಿಕಲ್​ ಕಾಲೇಜು
ಟಿ. ಬೇಗೂರು ಮೆಡಿಕಲ್​ ಕಾಲೇಜು

ಕಾಲೇಜು ಮೂಲಕಗಳ ಪ್ರಕಾರ ಇದೊಂದು ರೆಗ್ಯುಲರ್​ ಸರ್ಚ್​ ಆಗಿದೆ. ತುಮಕೂರಿನಲ್ಲಿ ಇಡಿ ದಾಳಿಯಾಗುವಾಗ ಪರಮೇಶ್ವರ್ ಅವರು ಸದಾಶಿವನಗರದಲ್ಲಿದ್ದರು. ಇಡಿ ದಾಳಿ ಮಾಹಿತಿ ಬರ್ತಿದ್ದಂತೆ ಬೆಂಗಳೂರಿನಿಂದ ತುಮಕೂರಿಗೆ ಪರಂ ತೆರಳಿದ್ದಾರೆ. ಮಾದ್ಯಮಗಳಿಗೆ ಪ್ರತಿಕ್ರಿಯೆ ಪತ್ನಿ ಕನಿಕಾ ಪರಮೇಶ್ವರಿ ಜೊತೆಗೆ ತುಮಕೂರಿನತ್ತ ಪರಂ ದೌಡಾಯಿಸಿದ್ದಾರೆ.

ನಾಲ್ಕು ವರ್ಷದ ಹಿಂದೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ (IT) ಇಲಾಖೆ ದಾಳಿ ನಡೆಸಿತ್ತು. ಈ ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಆಗ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ವಿಜಯಪುರದಲ್ಲಿ ಭೀಕರ ಸರಣಿ ಅಪಘಾತ.. ಸ್ಥಳದಲ್ಲೇ ಐವರು ದುರ್ಮರಣ!

 

 

Btv Kannada
Author: Btv Kannada

Read More