ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ಇಂದು ಕೋರ್ಟ್ಗೆ ಹಾಜರಾಗಿದ್ದಾರೆ. ನಟ ದರ್ಶನ್ ಸೇರಿ ಇತರ ಆರೋಪಿಗಳಿಗೂ ಕೋರ್ಟ್ ಮುಂದೆ ಹಾಜರಾಗಲು ನೋಟಿಸ್ ಜಾರಿಗೊಳಿಸದ ಬೆನ್ನಲ್ಲೇ ಪ್ರಕರಣದ ಎಲ್ಲಾ ಆರೋಪಿಗಳು ಇಂದು ಕೋರ್ಟ್ಗೆ ಬಂದಿದ್ದರು.
ಈ ವೇಳೆ ಅಚ್ಚ ಬಿಳುಪಿನ ಸೀರೆ ಹಾಗೂ ಅಚ್ಚ ಬಿಳುಪಿನ ಬ್ಲೌಸ್ ಧರಿಸಿಕೊಂಡು, ಕೂದಲು ಬಿಚ್ಚಿಟ್ಟು ಪವಿತ್ರಾ ಗೌಡ ಕೋರ್ಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಪವಿತ್ರಾ ಈ ಹಿಂದೆ ಕಲರ್ಫುಲ್ ಸೀರೆ ಉಟ್ಟುಕೊಂಡೇ ಕೋರ್ಟ್ ವಿಚಾರಣೆಗ ಬಂದಿದ್ದರು. ಆದ್ರೆ ಈ ಬಾರಿ ಅವರ ಲುಕ್ ಎಲ್ಲರ ಗಮನ ಸೆಳೆದಿದೆ.
ಇನ್ನೊಂದು ವಿಚಾರ ಎಂದರೆ ನಟಿ ಈ ಹಿಂದೆ ಬರುವಾಗ ಕೂದಲು ಪೋನಿಟೇಲ್ ಮಾಡಿದ್ದರು. ಇದೀಗ ನಟಿ ಬಿಳಿ ಸೀರೆ ಉಟ್ಟು, ಕೂದಲು ಬಿಚ್ಚಿಟ್ಟು ಕೋರ್ಟ್ಗೆ ಬಂದಿದ್ದು, ಇದು ಉದ್ದೇಶಪೂರ್ವಕ ನಡೆಯೇ? ಅಥವಾ ಯಾರಿಗಾದರೂ ಪವಿತ್ರಾ ಗೌಡ ಹಿಡನ್ ಮೆಸೇಜ್ ಕೊಡೋಕೆ ಉದ್ದೇಶಿಸಿದ್ರಾ? ಎಂಬ ಚರ್ಚೆಗಳು ಶುರುವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳಾಗುತ್ತಿದ್ದು, ನೀನಿನ್ನು ನನ್ನ ಪಾಲಿಗಿಲ್ಲ ಎನ್ನುವ ಮೆಸೇಜ್ ಕೊಟ್ರಾ ಪವಿತ್ರಾ ಗೌಡ? ಈ ಫೊಟೋ ನೋಡಿದರೆ ಅದೇ ಭಾವನೆ ಮೂಡಿಸುವಂತೆ ಇದೆ ಎಂದಲ್ಲಾ ಟ್ರೋಲ್ ಆಗುತ್ತಿದೆ. ಪವಿತ್ರಾ ಗೌಡ ಕಂಪ್ಲೀಟ್ ಬಿಳಿ ಸೀರೆ ಉಟ್ಟು ಬಂದ ಉದ್ದೇಶ ಏನು? ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಮೇ 20ರಂದು ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಪೇಜ್ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇದನ್ನೂ ಓದಿ : ಕೊಲೆ ಆರೋಪಿ ನಟ ದರ್ಶನ್ ಕೋರ್ಟ್ಗೆ ಹಾಜರ್ – ತನಿಖಾಧಿಕಾರಿಯಿಂದ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ!
