ಬೆಂಗಳೂರು : ಬಿಜೆಪಿ ಹಿರಿಯ ಶಾಸಕ ಎಸ್ ಸುರೇಶ್ ಕುಮಾರ್ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ತೆರೆದು ಹಣ ದೋಚಲು ಕಿರಾತಕರು ಪ್ಲಾನ್ ಮಾಡಿದ್ದಾರೆ.
ಈ ಬಗ್ಗೆ ಖುದ್ದು ಶಾಸಕ ಎಸ್ ಸುರೇಶ್ ಕುಮಾರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದರ ಮೂಲಕ ಯಾರು ಮೋಸಕ್ಕೆ ಒಳಗಾಗಬಾರದೆಂದು ಮನವಿ ಮಾಡಿದ್ದಾರೆ.

“ಮಗದೊಮ್ಮೆ ಅದೇ ಕಥೆ. ನನ್ನ ಹೆಸರಿನಲ್ಲಿ ಯಾರೋ ದುಷ್ಟ ಶಕ್ತಿಗಳು ನಕಲಿ ಫೇಸ್ಬುಕ್ ಅಕೌಂಟ್ ತೆರೆದು ಎಲ್ಲರ ಫ್ರೆಂಡ್ಶಿಪ್ ಯಾಚಿಸಿ ಹಣವನ್ನು ಕೇಳುತ್ತಿದ್ದಾರೆ. ನಾನು ಯಾವುದೂ ಹೊಸದಾಗಿ ಫೇಸ್ಬುಕ್ ಅಕೌಂಟ್ ಓಪನ್ ಮಾಡಿಲ್ಲ. ಯಾರು ಈ ದುಷ್ಟ ಶಕ್ತಿಗಳ ಪ್ರಯತ್ನಕ್ಕೆ ಬಲಿಯಾಗಬಾರದು, ಯಾವ ಕಾರಣಕ್ಕೂ ಹಣವನ್ನು ಪಾವತಿ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದೇನೆ. ಮತ್ತೊಮ್ಮೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿ ಅದನ್ನು ಸ್ಥಗಿತಗೊಳಿಸಿ ಈ ದುಷ್ಟ ಪ್ರಯತ್ನದ ಮೂಲಕ್ಕೆ ಹೋಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗುತ್ತದೆ” ಎಂದು ಎಸ್ ಸುರೇಶ್ ಕುಮಾರ್ ಅವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : http://ಕುಂಭಮೇಳದಲ್ಲಿ ಸ್ನಾನ ಮಾಡಿದ್ರೂ ಪಾಪ ಹೋಗಿಲ್ಲ- ಶಾಸಕ ಸುರೇಶ್ ಗೌಡ ವಿರುದ್ಧ ಗೌರಿಶಂಕರ್ ವಾಗ್ದಾಳಿ!
