ಆನ್ಲೈನ್ ಜೂಜಿಗಾಗಿ ಸರಗಳ್ಳತನಕ್ಕೆ ಇಳಿದಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೀದರ್ ಮೂಲದ ಕಿರಣ್ ಬಂಧಿತ ಆರೋಪಿ.

ಆನ್ಲೈನ್ ರಮ್ಮಿ ಆಟಕ್ಕೆ ದಾಸನಾಗಿದ್ದ ಕಿರಣ್, ರಮ್ಮಿ ಆಟ ಆಡಲು ಹಣವಿಲ್ಲವೆಂದು ಕೆಲಸ ಹುಡುಕಿ ಬೀದರ್ನಿಂದ ಬೆಂಗಳೂರಿಗೆ ಬಂದಿದ್ದ. ಆದ್ರೆ ಕಿರಣ್ಗೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಬಳಿಕ ಸರಗಳ್ಳತನಕ್ಕೆ ಇಳಿದಿದ್ದ.
ಕಳೆದ ಜ. 26ರಂದು ಜಯನಗರದ ಶಾಕಾಂಬರಿನಗರದಲ್ಲಿ ವೃದ್ದೆಯ ಸರ ಕಸಿದು ಪರಾರಿಯಾಗಿದ್ದ ಕಿರಣ್, ರೈಲಿನ ಮೂಲಕ ಬೀದರ್ಗೆ ತೆರಳಿದ್ದ. ಕಿರಣ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಂಗಳೂರಿನಲ್ಲಿ ಕದ್ದ ಸರವನ್ನ ಬೀದರ್ನಲ್ಲಿ ಅಡಮಾನವಿಟ್ಟಿದ್ದ ಕಿರಣ್, ಅದ್ರಿಂದ ಬಂದ ದುಡ್ಡನ್ನ ಆನ್ಲೈನ್ ರಮ್ಮಿ ಜೂಜಾಟವನ್ನು ಮತ್ತೆ ಶುರು ಮಾಡಿಕೊಂಡಿದ್ದ.
ವೃದ್ದೆಯ ಕುಟುಂಬಸ್ಥರ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಜಯನಗರ ಪೊಲೀಸರು ಪ್ರಕರಣ ದಾಖಲಿಸಿ ಬೀದರ್ಗೆ ತೆರಳಿ ಸರಗಳ್ಳ ಕಿರಣ್ನ್ನು ಬಂಧಿಸಿದ್ದಾರೆ. ಇದೀಗ ಜಯನಗರ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ : http://ಇಂದು ದೆಹಲಿ ಎಲೆಕ್ಷನ್ ರಿಸಲ್ಟ್ – ಆಪ್, ಬಿಜೆಪಿ, ಕಾಂಗ್ರೆಸ್.. ಈ ಮೂವರಲ್ಲಿ ವಿಜಯ ಮಾಲೆ ಯಾರಿಗೆ?
