ಆನ್‌ಲೈನ್‌ ಜೂಜಿಗಾಗಿ ಹಣವಿಲ್ಲವೆಂದು ಸರಗಳ್ಳತನಕ್ಕೆ ಇಳಿದ ಆಸಾಮಿ ಅರೆಸ್ಟ್​!

ಆನ್‌ಲೈನ್‌ ಜೂಜಿಗಾಗಿ ಸರಗಳ್ಳತನಕ್ಕೆ ಇಳಿದಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೀದರ್ ಮೂಲದ ಕಿರಣ್ ಬಂಧಿತ ಆರೋಪಿ.

ಆನ್​ಲೈನ್​ ರಮ್ಮಿ ಆಟಕ್ಕೆ ದಾಸನಾಗಿದ್ದ ಕಿರಣ್, ರಮ್ಮಿ ಆಟ ಆಡಲು ಹಣವಿಲ್ಲವೆಂದು ಕೆಲಸ ಹುಡುಕಿ ಬೀದರ್​ನಿಂದ ಬೆಂಗಳೂರಿಗೆ ಬಂದಿದ್ದ. ಆದ್ರೆ ಕಿರಣ್​ಗೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಬಳಿಕ ಸರಗಳ್ಳತನಕ್ಕೆ ಇಳಿದಿದ್ದ.

ಕಳೆದ ಜ. 26ರಂದು ಜಯನಗರದ ಶಾಕಾಂಬರಿನಗರದಲ್ಲಿ ವೃದ್ದೆಯ ಸರ ಕಸಿದು ಪರಾರಿಯಾಗಿದ್ದ ಕಿರಣ್, ರೈಲಿನ ಮೂಲಕ ಬೀದರ್​ಗೆ ತೆರಳಿದ್ದ. ಕಿರಣ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಂಗಳೂರಿನಲ್ಲಿ ಕದ್ದ ಸರವನ್ನ ಬೀದರ್​ನಲ್ಲಿ ಅಡಮಾನವಿಟ್ಟಿದ್ದ ಕಿರಣ್, ಅದ್ರಿಂದ ಬಂದ ದುಡ್ಡನ್ನ ಆನ್​ಲೈನ್ ರಮ್ಮಿ ಜೂಜಾಟವನ್ನು ಮತ್ತೆ ಶುರು ಮಾಡಿಕೊಂಡಿದ್ದ.

ವೃದ್ದೆಯ ಕುಟುಂಬಸ್ಥರ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಜಯನಗರ ಪೊಲೀಸರು ಪ್ರಕರಣ ದಾಖಲಿಸಿ ಬೀದರ್​ಗೆ ತೆರಳಿ ಸರಗಳ್ಳ ಕಿರಣ್​ನ್ನು ಬಂಧಿಸಿದ್ದಾರೆ. ಇದೀಗ ಜಯನಗರ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ : http://ಇಂದು ದೆಹಲಿ ಎಲೆಕ್ಷನ್​ ರಿಸಲ್ಟ್ – ಆಪ್​, ಬಿಜೆಪಿ, ಕಾಂಗ್ರೆಸ್..​ ಈ ಮೂವರಲ್ಲಿ ವಿಜಯ ಮಾಲೆ ಯಾರಿಗೆ?

Btv Kannada
Author: Btv Kannada

Read More

Read More