ಕಾಂತಾರ ಪ್ರೀಕ್ವೆಲ್ ಶುರುವಾದಗಿನಿಂದ ಒಂದಲ್ಲಾ ಒಂದು ವಿವಾದಗಳಿಂದ ಸದ್ದು ಮಾಡುತ್ತಲೇ ಇದೆ. ಪಾಸಿಟಿವ್ಗಿಂತ ನೆಗೆಟಿವ್ ವಿಚಾರದಲ್ಲಿಯೇ ಈ ಸಿನಿಮಾ ಸುದ್ದಿಯಾಗ್ತಿದ್ದು, ಈಗ ರಾಕೇಶ್ ಪೂಜಾರಿ ವಿಚಾರಕ್ಕೆ ನೆಟ್ಟಿಗರು ರಿಷಬ್ಗೆ ಕ್ಲಾಸ್ ತೆಗೆದುಕೊಳ್ತಿದ್ದಾರೆ.
ಕಾಂತಾರ ಸಿನಿಮಾ ಮೂಲಕ ರಿಷಬ್ ಶೆಟ್ಟಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದರು. 16 ಕೋಟಿಯ ಬಜೆಟ್ನ ಕಾಂತಾರದಲ್ಲಿ ದೈವದ ಆಶೀರ್ವಾದದಿಂದ ರಿಷಬ್ ಶೆಟ್ಟಿ ಗೆಳೆಯ ರಕ್ಷಿತ್ ಶೆಟ್ಟಿಯನ್ನೇ ಮೀರಿಸಿ ಬೆಳೆದಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನಕ್ಕೂ ಸೈ ನಟನೆಗೂ ಜೈ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಕ್ಕಾಗಿ ಕುಟುಂಬವು ಕೂಡ ರಿಷಬ್ ಜೊತೆಗೆ ಕುಂದಾಪುರದಲ್ಲಿಯೇ ಬೀಡುಬಿಟ್ಟಿದೆ. ಹೀಗಿರುವಾಗ ಕಾಂತಾರ ಪ್ರೀಕ್ವೆಲ್ಗೆ ವಿಘ್ನಗಳು ಎದುರಾಗಿದ್ಯಾ ಅನ್ನೋ ಬೆನ್ನಿನಲ್ಲೇ ಒಂದಿಲ್ಲ ಒಂದು ವಿವಾದಗಳಿಗೂ ಸಾಕ್ಷಿಯಾಗ್ತಿದೆ.
ಇತ್ತೀಚಿಗೆ ಕಪಿಲ್ ನೀರಿನಲ್ಲಿ ಮುಳುಗಿ ಸಾವಿಗೀಡಾದ ಸುದ್ದಿ ಬರ್ತಿದ್ದಂತೆ ರಿಷಬ್ ಅವರನ್ನ ಹೋಗಿನೋಡುವ ಪ್ರಯತ್ನ ಮಾಡಿದ್ರೋ ಇಲ್ಲವೋ ಆದ್ರೆ ಸೋಷಿಯಲ್ ಮಿಡಿಯಾದಲ್ಲಿ ಅದಕ್ಕೆ ಸ್ಪಷ್ಟನೆ ಮಾತ್ರ ಕೊಟ್ಟರು. ಕಪಿಲ್ ಸಾವು ಶೂಟಿಂಗ್ ಸಮಯದಲ್ಲಿ ಆದದ್ದಲ್ಲ ಅಂತ ಪೋಸ್ಟ್ ಹಾಕಿದ್ದರು.
ಇದನ್ನೂ ಓದಿ : ಖ್ಯಾತ ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲಾಕ್ಮೇಲ್ – ಯೂಟ್ಯೂಬರ್ ದಿವ್ಯಾ ವಸಂತ ವಿರುದ್ಧ FIR!
