ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಯುವಕ – ಮನನೊಂದು ಯುವತಿ ಆತ್ಮಹತ್ಯೆ!

ಚಿತ್ರದುರ್ಗ : ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕನಿಂದ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರದಲ್ಲಿ ನಡೆದಿದೆ. 22 ವರ್ಷದ ಅಂಜಲಿ ಆತ್ಮಹತ್ಯೆಗೆ ಶರಣಾದ ಯುವತಿ.

ರಾಂಪುರ ಗ್ರಾಮದ ಭಾರ್ಗವ್ ರೆಡ್ಡಿ ಎಂಬಾತ ಕಳೆದ 2 ವರ್ಷಗಳಿಂದ ಅಂಜಲಿಯನ್ನು ಪ್ರೀತಿಸುತ್ತಿದ್ದ. ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಅಂಜಲಿ ಹಾಗೂ ಇಂಜಿನಿಯರ್ ಆಗಿದ್ದ ಭಾರ್ಗವ್ ಪರಸ್ಪರ ಪ್ರೀತಿಸುತ್ತಿದ್ದರು. ಭಾರ್ಗವ್ ರೆಡ್ಡಿ ಜಾತಿ ಕಾರಣ ನೀಡಿ ದೂರವಾಗಿದ್ದ. ಇದರಿಂದ ಮನನೊಂದ ಅಂಜಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರೀತಿಯ ಹೆಸರಿನಲ್ಲಿ ವಂಚಿಸಿದ ಭಾರ್ಗವ್ ರೆಡ್ಡಿ ವಿರುದ್ಧ ಅಂಜಲಿ ಪೋಷಕರು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು PI ವಸಂತ್ ಅಸೋಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಭಾರ್ಗವ್ ರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ – ದಿಢೀರ್ ಮಳೆಗೆ ಜನ ತತ್ತರ!

Btv Kannada
Author: Btv Kannada

Read More