ರಾಷ್ಟ್ರ್ರಧ್ವಜಕ್ಕೆ ಕೈ ಒರೆಸಿ ಅಪಮಾನ ಕೇಸ್ – ಕೃಷ್ಣಪ್ಪ ವಿರುದ್ಧ ಆರೋಪಪಟ್ಟಿ ದಾಖಲಿಸದಂತೆ ಹೈಕೋರ್ಟ್ ಮಧ್ಯಂತರ ತಡೆ!

ಬೆಂಗಳೂರು : ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿ ಅಪಮಾನ ಮಾಡಿದ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ ವಿರುದ್ದ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು, ಈ ಎಫ್ಐಆರ್ ರದ್ದು ಕೋರಿ ಎ. ಕೃಷ್ಣಪ್ಪ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಇಂದು ಕೋರ್ಟ್ ಅರ್ಜಿ​ ವಿಚಾರಣೆ ನಡೆಸಿದೆ. ಕೃಷ್ಣಪ್ಪ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ‘ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಉದ್ದೇಶವಿರಲಿಲ್ಲವೆಂದು’ ವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಕೃಷ್ಣಪ್ಪ ವಿರುದ್ಧ ಆರೋಪಪಟ್ಟಿ ದಾಖಲಿಸದಂತೆ ತಡೆ ನೀಡಿ ಆದೇಶಿಸಿದ್ದಾರೆ.

ಏನಿದು ಪ್ರಕರಣ ? ಮೇ 8ರಂದು ಜಯನಗರ 9ನೇ ಬ್ಲಾಕ್​ನಲ್ಲಿರುವ ಬಲಮುರಿ ವಿನಾಯಕ ಸುಬ್ರಹ್ಮಣ್ಯ ದೇವಾಲಯದ ಬಳಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ ರಾಮಮೂರ್ತಿ ಮತ್ತು ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭ ಸಿಹಿ ಹಂಚುವಾಗ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿಯವರ ಪಕ್ಕದಲ್ಲಿದ್ದ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ ರಾಷ್ಟ್ರಧ್ವಜವನ್ನು ಕರಾವಸ್ತ್ರದಂತೆ ಬಳಸಿಕೊಂಡು ಕೈ ಒರೆಸಿಕೊಂಡಿದ್ದಾರೆ. ಇದು ಸಾರ್ವಕನಿಕ ವಲುದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ : ಒಂದೂವರೆ ವರ್ಷದಿಂದ ಅಪ್​ಡೇಟೇ ಆಗಿಲ್ಲ ಬಿಡಿಎ ವೆಬ್ಸೈಟ್ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಲ್ಲಿ ಗೊಂದಲ!

Btv Kannada
Author: Btv Kannada

Read More