ಕದನ ವಿರಾಮ ಉಲ್ಲಂಘಿಸಿ ಮತ್ತೆ ಬಾಲ ಬಿಚ್ಚಿದ ಪಾಕ್ – ಶ್ರೀನಗರ ಸೇರಿ ಹಲವೆಡೆ ಡ್ರೋನ್ ಅಟ್ಯಾಕ್.. ಭಾರತೀಯ ಸೇನೆಯಿಂದ ದಿಟ್ಟ ಉತ್ತರ!

​ಶ್ರೀನಗರ : ಅಮೆರಿಕ ಮಧ್ಯಸ್ಥಿಕೆ ವಹಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಿತ್ತು. ಪಾಕಿಸ್ತಾನವೇ ಭಾರತದ ಬಳಿ ಕದನ ವಿರಾಮವನ್ನು ಪ್ರಸ್ತಾಪಿಸಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೂ ತನ್ನ ಹಳೇ ಚಾಳಿ ಮುಂದುವರೆಸಿರುವ ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಮೂರೇ ಗಂಟೆಯಲ್ಲಿ ಮತ್ತೆ ಭಾರತದ ಮೇಲೆ ದಾಳಿ ನಡೆಸಿದೆ.

ಹೌದು.. ನಿನ್ನೆ ಸಂಜೆ 5 ಗಂಟೆಯಿಂದ ಕದನ ವಿರಾಮ ಘೋಷಿಸಲಾಗಿತ್ತು. ಆದರೆ, ರಾತ್ರಿ 8.45ರ ಸುಮಾರಿಗೆ ಜಮ್ಮುವಿನ ಉದಂಪುರ ಮತ್ತು ಸಾಂಬಾದಲ್ಲಿ ಪಾಕ್ ಮತ್ತೆ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಿದೆ. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಚ್ ಗಡಿಯಲ್ಲಿ ಹೊಸ ಡ್ರೋನ್‌ಗಳು ಪತ್ತೆಯಾಗಿದ್ದು, ಶ್ರೀನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಭಾರತ ಮತ್ತು ಪಾಕಿಸ್ತಾನ ತಕ್ಷಣ ಹಾಗೂ ಪೂರ್ತಿಯಾಗಿ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ ಎಂದು ಘೋಷಿಸಿದ್ದರು. ಅದನ್ನು ಭಾರತ ಮತ್ತು ಪಾಕಿಸ್ತಾನ ಕೂಡ ಸ್ಪಷ್ಟಪಡಿಸಿತ್ತು.

ಇದೀಗ ಪಾಕಿಸ್ತಾನದ ಈ ಕೃತ್ಯ ಗಡಿಯಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತೀಯ ಸೇನೆ ಎಚ್ಚರಿಕೆಯಿಂದ ಡ್ರೋನ್ ಚಟುವಟಿಕೆಗಳನ್ನು ಗಮನಿಸುತ್ತಿದ್ದು, ಗಡಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಪಠಾಣ್‌ಕೋಟ್‌ನಲ್ಲಿ ಕೂಡ ಬಿಗಿ ಭದ್ರತೆಯೊಂದಿಗೆ ಬ್ಲಾಕ್‌ಔಟ್ ಜಾರಿಯಲ್ಲಿದೆ. ಈ ಘಟನೆಯಿಂದ ಗಡಿಪ್ರದೇಶದ ಜನತೆಯಲ್ಲಿ ಆತಂಕ ಮನೆಮಾಡಿದೆ.

ಭಾರತದ ಸುಪ್ರೀಂ ರಕ್ಷಣಾ ತಂಡ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಕದನ ವಿರಾಮದ ಘೋಷಣೆಯ ನಂತರವೂ ಪಾಕ್‌ ಇಂತಹ ಕೃತ್ಯ ನಡೆಸಿರುವುದಕ್ಕೆ ಭಾರತ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಸದ್ಯ ಪಾಕಿಸ್ತಾನಕ್ಕೆ ದಾಳಿಗೆ ದಿಟ್ಟ ಉತ್ತರ ನೀಡುತ್ತಿರುವ ಭಾರತದ ಭದ್ರತಾ ಪಡೆಗಳು, ಎಲ್ಲಾ ಡ್ರೋನ್, ಶೆಲ್​ಗಳನ್ನು ಹೊಡೆದುರುಳಿಸಿದೆ.

ಇದನ್ನೂ ಓದಿ : ‘ತಾಯವ್ವ’ ಚಿತ್ರದ ಟ್ರೇಲರ್‌ ರಿಲೀಸ್ – ಹಿರಿಯ ನಟ ಶ್ರೀನಾಥ್‌ ಸಾಥ್!

Btv Kannada
Author: Btv Kannada

Read More