ಬೆಂಗಳೂರು : ಹವಾಲ ಅಮೌಂಟ್ ದೋಚಿದ್ದ ಮೂವರು ಪೊಲೀಸರನ್ನು ಅರೆಸ್ಟ್ ಮಾಡಲಾಗಿದೆ. ಚಿಕ್ಕಜಾಲದ ಹೆಡ್ ಕಾನ್ಸ್ಟೇಬಲ್ ವಿಜಯ್ ಕುಮಾರ್, ಕಾನ್ಸ್ಟೇಬಲ್ ಸಂತೋಷ್ ಹಾಗೂ ಕಾನ್ಸ್ಟೇಬಲ್ ಮಂಜುನಾಥ್ ಬಂಧಿತರು.
ಈ ಪ್ರಕರಣದಲ್ಲಿ ಬಾಗಲೂರು ಪೊಲೀಸರು ಮೂವರು ಕಾನ್ಸ್ಟೇಬಲ್ಗಳು ಸೇರಿ ಹತ್ತು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಾನ್ಸ್ಟೇಬಲ್ ಸಂತೋಷ್ ಪಿ.ಕೆ ಎಂಬ ವ್ಯಕ್ತಿಯನ್ನ ಬಳಸಿಕೊಂಡು ವ್ಯವಹಾರ ಮಾಡ್ತಿದ್ದ. ಮೇ 4ನೇ ತಾರೀಕು ಚಿಕ್ಕಜಾಲ ಲಿಮಿಟ್ಸ್ನಲ್ಲಿ ಡಿಕಾಯ್ ಮಾಡಿ ಹವಾಲ ವ್ಯಕ್ತಿಗಳಿಂದಲೇ ಪೊಲೀಸರು ಕೋಟಿ ಕೋಟಿ ಹಣ ದೋಚಿದ್ದರು.
ಕಂಪ್ಲೆಂಟ್ ಕೊಟ್ಟರೆ ಕೇಸ್ ಮಾಡ್ತೀವಿ ಅಂತ ಬೆದರಿಸಿದ್ದ ಪೊಲೀಸರು, ಈ ಮಾತಿಗೆ ಹೆದರಿದ ಹವಾಲ ವ್ಯಕ್ತಿಗಳು ಮೂವರು ಪೊಲೀಸರ ಕೈಗೆ ಕೋಟಿ ಹಣವನಿಟ್ಟು ಪರಾರಿಯಾಗಿದ್ದರು. ಆದರೆ, ಹಣ ಲೂಟಿ ಮಾಡಿದ್ದ ಪೊಲೀಸರು ಇನ್ಫಾರ್ಮರ್ಗೆ ನಯಾಪೈಸೆನೂ ಕೊಟ್ಟಿರ್ಲಿಲ್ಲ. ಅದಕ್ಕಾಗಿ ಇನ್ಫಾರ್ಮರ್ರ್ ತನ್ನದೇ ತಂಡ ಕಟ್ಟಿಕೊಂಡು ಅದೇ ಹವಾಲ ಗ್ಯಾಂಗನ್ನ ಫಾಲೋ ಮಾಡಿತ್ತು. ಬಾಗಲೂರು ಭಾಗದಲ್ಲಿ ಹವಾಲ ಗ್ಯಾಂಗ್ ಕೋಟಿ ಹಣವನ್ನ ಎಕ್ಸ್ ಚೇಂಜ್ ಮಾಡೋ ಟೈಮಲ್ಲೇ ಇನ್ಫಾರ್ಮರ್ ಟೀಂ ಹೆದರಿಸಿ ಸುಲಿಗೆ ಮಾಡಿತ್ತು.
ಕೋಟಿ ಹಣವನ್ನ ಕೊಳ್ಳೆ ಹೊಡೆದು ಪರಾರಿಯಾಗ್ತಿದ್ದಂತೆ ಹವಾಲ ಟೀಂ ಬಾಗಲೂರು ಪೊಲೀಸರಿಗೆ ದೂರನ್ನ ನೀಡಿತ್ತು. ಇದೀಗ ಹವಾಲ ಟೀಂ ಸುಲಿಗೆ ಮಾಡಿದ್ದ ಇನ್ಫಾರ್ಮರ್ ಅರೆಸ್ಟ್ ಆಗಿದ್ದಾರೆ. ತನಿಖೆಯ ವೇಳೆ ಆರೋಪಿಗಳು ಮೂವರು ಪೊಲೀಸರ ಜೊತೆ ಸೇರಿ ಸುಲಿಗೆ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ಹತ್ತಾರು ಕೇಸಲ್ಲಿ ಸುಲಿಗೆ ಮಾಡಿರೋ ಸುಲಿಗೆ ಪೊಲೀಸ್ ಟೀಂ, ಕಳ್ಳರ ಜೊತೆ ಕೈಜೋಡಿಸಿ ಇದೀಗ ಕಂಬಿ ಹಿಂದೆ ಕೂತಿದೆ. ಮೂವರು ಪೊಲೀಸರನ್ನ ಬಂಧಿಸಿರುವ ಬಾಗಲೂರು ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ‘ಆಪರೇಷನ್ ಸಿಂಧೂರ’ ಸಕ್ಸಸ್ಗೆ ರಾಜ್ಯ ಸರ್ಕಾರ ಸಾಥ್.. ಬೆಂಗಳೂರಲ್ಲಿ ತಿರಂಗಾ ಯಾತ್ರೆ!
