ಪಾಕ್ ಮೇಲೆ ಭಾರತ ‘ಸುದರ್ಶನ ಚಕ್ರ’ ಪ್ರಯೋಗ – ಲಾಹೋರ್ ಸೇರಿ ಹಲವು ಪ್ರದೇಶಗಳ ಸೇನಾ ನೆಲೆ ಧ್ವಂಸ!

ಆಪರೇಷನ್​​ ಸಿಂಧೂರ ಬಳಿಕ ಭಾರತ ಪಾಕ್​​ ವಿರುದ್ಧ ‘ಸುದರ್ಶನ ಚಕ್ರ’ ಪ್ರಯೋಗಿಸಿದೆ. ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ನಡೆಸಿದ್ದು, ಅದನ್ನ S-400 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣವಾಗಿ ವಿಫಲಗೊಳಿಸಿದೆ. ಭಾರತದ ರಕ್ಷಣಾ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ S-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತವನ್ನ ರಕ್ಷಿಸಿದೆ.

ಈಗ ಲಾಹೋರ್​ನ ಪಾಕ್ ವಾಯುನೆಲೆ ಮೇಲೆ ಭಾರತ ದಾಳಿ ನಡೆಸಿದೆ. ಪಾಕ್​ಗೆ ನುಗ್ಗಿ ಭಾರತ ಸೇನೆಯ ಡ್ರೋನ್​ಗಳು ಹೊಡೆದಿದ್ದು, ಲಾಹೋರ್​​ಗೆ ನುಗ್ಗಿ ಹೊಡೆದ ಬಗ್ಗೆ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಮಾಹಿತಿ ತಿಳಿಸಿದೆ. ಪಾಕ್​ ಡಿಫೆನ್ಸ್​ ರಾಡಾರ್​ಗಳನ್ನು ಭಾರತ ಟಾರ್ಗೆಟ್ ಮಾಡಿದ್ದು, ಇತಿಹಾಸದಲ್ಲೇ ಮೊದಲ ಬಾರಿ ಭಾರತ ಪಾಕ್​​ಗೆ ನುಗ್ಗಿ ಹೊಡೆದಿದೆ. ಪಾಕಿಸ್ತಾನದ ಮಿಲಿಟರಿ ಬೇಸ್ ಅನ್ನೇ ಭಾರತ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಪಾಕಿಸ್ತಾನ ಭಾರತದ ಗಡಿ ಭಾಗಗಳನ್ನು ಟಾರ್ಗೆಟ್ ಮಾಡಿಕೊಂಡು ಅಟ್ಯಾಕ್ ಮಾಡಲು ಯತ್ನಿಸಿದ್ದಕ್ಕೆ ಪ್ರತಿಯಾಗಿ ಭಾರತ ಸೇನಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ 17 ಕಾಮಿಕಾಜೆ ಡ್ರೋನ್ ಬಳಕೆ ಮಾಡಲಾಗಿದೆ. ಡ್ರೋನ್‌‌ಗಳು ಪಾಕಿಸ್ತಾನದ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿವೆ. ರಾವಲ್ಪಿಂಡಿ, ಕರಾಜಿ, ಇಸ್ಲಮಾಬಾದ್, ಲಾಹೋರ್ ಸೇರಿದಂತೆ ಹಲವು ಸೇನಾ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ.

ಪಾಕಿಸ್ತಾನ ಸೇನೆಯ ದಾಳಿಯನ್ನು ವಿಫಲಗೊಳಿಸಿರುವ ಭಾರತೀಯ ಸೇನೆ S-400 ಏರ್​ಡಿಫೆನ್ಸ್ ಸಿಸ್ಟಮ್ ಮೂಲಕ ಪಾಕಿಸ್ತಾನದ ಚೀನಾ ನಿರ್ಮಿತ HQ-9  ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸ ಮಾಡಿದೆ. ಪಾಕಿಸ್ತಾನದ ಕ್ಷಿಪಣಿಗಳ ಅವಶೇಷಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.

ಇದನ್ನೂ ಓದಿ : ಸಚಿವ ದಿನೇಶ್ ಗುಂಡೂರಾವ್ ಪತ್ನಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ – ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಆಯೋಗಕ್ಕೆ ದೂರು!

Btv Kannada
Author: Btv Kannada

Read More