ನೆಲಮಂಗಲ : ಪಾಕ್ ಉಗ್ರರು ಜಮ್ಮು ಕಾಶ್ಮೀರದ ಪೆಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ದೇಶದ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ದೇಶದಾದ್ಯಂತ ಅಭಿನಂದಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನಾಳೆ ನಮ್ಮ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ರ್ಯಾಲಿ ನಡೆಸಲಾಗುತ್ತದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಾಳೆ ಬೆಳಗ್ಗೆ 9:30 ಕೆ ಆರ್ ಸರ್ಕಲ್ನಿಂದ ಕೆಎಸ್ಸಿಎ ಸರ್ಕಲ್ವರೆಗೂ ಮಾರ್ಚ್ ಮಾಡಲಾಗತ್ತೆ. ರಾಷ್ಟ್ರೀಯ ತ್ರಿವರ್ಣ ಧ್ವಜ ಹಿಡಿದು ರ್ಯಾಲಿಯನ್ನ ಹಮ್ಮಿಕೊಳ್ಳಲಾಗಿದೆ. ಈ ದೇಶದ ಎಲ್ಲಾ ನಮ್ಮ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಮಾರ್ಚ್ ಮಾಡಲಾಗುತ್ತದೆ. ಪಾರ್ಟಿ, ಪಕ್ಷ ಏನಿಲ್ಲ.. ಎಲ್ಲಾ ಪಾರ್ಟಿ ಸಂಘಟನೆ, ಸರ್ಕಾರಿ, ಖಾಸಗಿ ಸಂಘಟನೆಗಳು ಭಾಗವಹಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯಾವುದೇ ಅಧಿಕಾರಿಗಳು, ಸಿನಿಮಾ, ವಿದ್ಯಾರ್ಥಿಗಳು, ಮುಖ್ಯಂತ್ರಿಗಳು ಹಾಗೂ ಕ್ಯಾಬಿನೆಟ್ಗೂ ಆಹ್ವಾನವಿದೆ. ವಿಧಾನಸೌಧ ಎದುರುಗಡೆ ದೇಶದ ಸೈನಿಕರಿಗೆ ಗೌರವ ಸಲ್ಲಿಸಲಾಗತ್ತೆ. ಸರ್ಕಾರದ ಪರವಾಗಿ ನಿಲ್ಲುವುದು ನಮ್ಮ ಧೋರಣೆಯಾಗಿದೆ. ಬೆಂಗಳೂರು ನಗರದ ಮಂತ್ರಿಯಾಗಿರುವುದರಿಂದ ನಾನೇ ಅಫಿಷಿಯಲ್ ಆಗಿ ಎಲ್ಲರಿಗೂ ಇನ್ವೈಟ್ ಮಾಡುತ್ತಿದ್ದೇನೆ ಎಂದಿದ್ದಾರೆ.
ರಾಜ್ಯದ ಅಣೆಕಟ್ಟುಗಳಿಗೆ ಹೆಚ್ಚಿನ ಭದ್ರತೆ ವಿಚಾರ ಕುರಿತು ಮಾತನಾಡಿದ ಅವರು, ನಮ್ಮ ಡ್ಯೂಟಿ. ನಮಗೆ ಎಲ್ಲಾ ಕಡೆಯೂ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ. ಜಾಗೃತವಾಗಿರಬೇಕು ಅಂತ ಮುಂಜಾಗೃತ ಕ್ರಮ ಕೈಗೊಳ್ಳಲಾಗುತ್ತಿದೆ. ಕಿಡಿಗೇಡಿಗಳು ಯಾರೇ ಇದ್ದರೂ ಕೂಡ ನಮ್ಮ ಸರ್ಕಾರ ಗಮನಹರಿಸಲಿದೆ. ಪೊಲೀಸ್ ಅಧಿಕಾರಿಗಳು ಗಮನ ವಹಿಸಿದ್ದಾರೆ ಎಂದರು.
ಇನ್ನು ಪಾಕಿಸ್ತಾನದ ಪ್ರಜೆಗಳನ್ನ ವಾಪಸ್ ಕಳಿಸುವ ಬಗ್ಗೆ ವಿಚಾರದ ಕುರಿತು ಮಾತನಾಡಿ, ಅದನ್ನ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಹೋಂ ಮಿನಿಸ್ಟರ್ ನೋಡಿಕೊಳ್ಳುತ್ತಾರೆ. ಒಳ ಮೀಸಲಾತಿ ರಿಸರ್ವೇಷನ್ ಮುಖ್ಯಮಂತ್ರಿಗಳೇ ಹೇಳಿದ್ದಾರಲ್ಲ, ಇಲ್ಲಿ ಏನು ಭೂಮಿ ಪೂಜೆ ಮಾಡಿದ್ದೇವೆ. ಎರಡು ಹಂತದಲ್ಲಿ ಪ್ಯೂರಿಫಿಕೇಷನ್ ಮಾಡಲಾಗುತ್ತಿದೆ. ಅರ್ಕಾವತಿ ನದಿಯ ಉಪನದಿ ವೃಷಭಾವತಿ ಇದನ್ನ ಹರಿಸುವ ಕೆಲಸ ಮಾಡಲಾಗುತ್ತಿದೆ. ರೈತರಿಗೆ ಉಪಯೋಗಕರ ರೀತಿಯಲ್ಲಿ ಸಹಾಯವಾಗಲಿದೆ ಎಂದು ನೆಲಮಂಗಲ ತಾಲೂಕಿನ ಕಣೇಗೌಡನಹಳ್ಳಿಯಲ್ಲಿ ಡಿಸಿಎಂ ಡಿಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಹಾವೇರಿಯಲ್ಲಿ ಭೀಕರ ಅಪಘಾತ.. ಜವರಾಯನ ಅಟ್ಟಹಾಸಕ್ಕೆ 6 ಜನ ಸ್ಥಳದಲ್ಲೇ ದುರ್ಮರಣ!
