ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ಯಾವಾಗಲೂ ವೈರಲ್ ಆಗುತ್ತಿರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಲೈವ್ ಬಂದಿದ್ದ ಅನುಶ್ರೀ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಶೀಘ್ರದಲ್ಲೇ ಮದುವೆ ಎಂದಿದ್ದರು. ಅಷ್ಟೇ ಅಲ್ಲ, ತಮ್ಮ ಕನಸಿಕ ಹುಡುಗನ ಬಗ್ಗೆಯೂ ಮಾತನಾಡಿದ್ದರು.
ಹಾಗಾಗಿ ಪುನೀತ್ ರಾಜ್ಕುಮಾರ್ ಅವರ ಬರ್ತ್ ಡೇ ದಿನವೇ ಆಂಕರ್ ಅನುಶ್ರೀ ಹಸೆಮಣೆ ಏರೋ ಬಗ್ಗೆ ಹೇಳ್ತಾರೆ ಎನ್ನಲಾಗಿತ್ತು. ಆದರೆ, ಅನುಶ್ರೀ ಮಾರ್ಚ್ 17 ರಂದು ಯಾವುದು ಅಪ್ಡೇಟ್ನ್ನು ನೀಡಿರಲಿಲ್ಲ.
ಕಿರುತೆರೆ ಕಾರ್ಯಕ್ರಮ ನಿರೂಪಣೆ ಮೂಲಕ ಕನ್ನಡಿಗರ ಮನಗೆದ್ದವರು ಅನುಶ್ರೀ ಸಾಕಷ್ಟು ವೇದಿಕೆ ಕಾರ್ಯಕ್ರಮಗಳನ್ನು ಕೂಡ ನಡೆಸಿ ಕೊಡುತ್ತಾರೆ. ಒಂದಷ್ಟು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಕನ್ನಡದ ಬಹುಬೇಡಿಕೆಯ ನಿರೂಪಕಿಯಾಗಿರುವ ಅನುಶ್ರೀ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ. ಜೀ ಕನ್ನಡ ವಾಹಿನಿ ಕಾರ್ಯಕ್ರಮಗಳ ಖಾಯಂ ನಿರೂಪಕಿಯಾಗಿ ಆಕೆ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ಸರಿಗಮಪ ಮಹಾಸಂಚಿಕೆ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಕೈ ಬೆರಳಿಗೆ ಉಂಗುರ ಬಿದ್ದಿದೆ. ಹಾಗಂತ ಅನುಶ್ರೀ ಎಂಗೇಜ್ಮೆಂಟ್ ನಡೀಲಿಲ್ಲ. ತಮ್ಮ ಕೈಬೆರಳಿಗೆ ಸ್ವತಃ ಅನುಶ್ರೀ ಉಂಗುರು ತೊಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಹಾಸ್ಯ ಕಲಾವಿದ ಗಿಲ್ಲಿ ನಟ. ಕಿರುತೆರೆ ಹಾಸ್ಯ ಕಾರ್ಯಕ್ರಮಗಳಲ್ಲಿ ಸ್ಕಿಟ್ ಮಾಡಿ ವೀಕ್ಷಕರನ್ನು ಗಿಲ್ಲಿ ನಟ ರಂಜಿಸುತ್ತಿದ್ದಾರೆ. ಜೋಕ್ಸ್ ಹೇಳಿ ಎಲ್ಲರನ್ನು ನಗಿಸುತ್ತಾರೆ. ಪ್ರಾಪರ್ಟಿ ಜೋಕ್ಸ್ ಹೇಳುವುದರಲ್ಲಿ ನಿಸ್ಸೀಮ. ರಿಂಗ್ ಹಿಡಿದು ವೇದಿಕೆ ಮೇಲೆ ಬಂದಿದ್ದ ಗಿಲ್ಲಿ ನಟ, ಅನುಶ್ರೀ ಕೈಗೆ ರಿಂಗ್ ಕೊಟ್ಟು ಹಾಕಿಕೊಳ್ಳಲು ಹೇಳಿದ್ದಾರೆ. “ಆಂಕರ್ ಕೈಗೆ ರಿಂಗ್ ಹಾಕಿದೆ. ಆಂಕರಿಂಗ್” ಎಂದು ಎಲ್ಲರನ್ನು ನಗಿಸೋ ಪ್ರಯತ್ನ ಮಾಡಿದ್ದಾರೆ. ಸದ್ಯ ಆ ವೀಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಬೈಕ್ಗೆ ಲಾರಿ ಡಿಕ್ಕಿ – ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವು!
