ಕನ್ನಡ ಸಿನಿಮಾಗಳು ಈ ವಾರ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿಲ್ಲ. ಕನ್ನಡ ಸಿನಿಮಾಗಳಲ್ಲಿ ಕಂಟೆಂಟ್ ಇಲ್ಲ ಅನ್ನೋ ಕೊರಗಿನ ಮಧ್ಯೆ ಇದೀಗ ಒಟಿಟಿಯಲ್ಲಿ ಕನ್ನಡದ ಸೂಪರ್ ಕಥೆಗಳು ಪ್ರೇಕ್ಷಕರನ್ನು ರಂಜಿಸಲು ಶುರುಮಾಡಿದೆ. ವರ್ಷದ ಹಿಂದೆ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದ ಕೆರೆಬೇಟೆ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ.
ಈ ಚಿತ್ರಕ್ಕೆ ರಾಜ್ ಗುರು ಬಿ ಆಕ್ಷನ್ ಕಟ್ ಹೇಳಿದ್ದು, ಗೌರಿ ಶಂಕರ್ ನಾಯಕನಾಗಿ ಕಾಣಿಸಿಕೊಂಡ ಈ ಕೆರೆಬೇಟೆಯಲ್ಲಿ ಬಿಂದು ಶಿವರಾಮ್, ಗೋಪಾಲ್ ಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರೆಯ ತಾರಾಗಣದಲ್ಲಿದ್ದಾರೆ. ಮಲೆನಾಡಿನ ಭಾಗದಲ್ಲಿ ಜನ ವರ್ಷಕ್ಕೊಮ್ಮೆ ಕೆರೆಗೆ ಹೋಗಿ ಮೀನು ಹಿಡಿಯು ಪದ್ದತಿ ಇದೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ತಯಾರಾಗಿದ್ದ ಕೆರೆಬೇಟೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಕನ್ನಡ ಕಾಲಪತ್ತರ್, ಸೋಮು ಸೌಂಡ್ ಇಂಜಿನಿಯರ್ ಕೂಡ ಓಟಿಟಿಯಲ್ಲಿ ಪ್ರದರ್ಶನ ಕಾಣ್ತಿದೆ.
ಇಡೀ ಸಿನಿಮಾವನ್ನು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಹಾಗೂ ಸೊರಬ ತಾಲ್ಲೂಕಿನ ಸುತ್ತ-ಮುತ್ತ ಶೂಟಿಂಗ್ ಮಾಡಲಾಗಿತ್ತು. ಈ ಸಿನಿಮಾ 50 ದಿನಗಳ ಕಾಲ ಪ್ರದರ್ಶನ ಕಂಡು ಸದ್ದು ಮಾಡಿತ್ತು. ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೂಡ ಕೆರೆಬೇಟೆ ಪ್ರದರ್ಶನ ಕಂಡಿತ್ತು.
ಇದನ್ನೂ ಓದಿ : ದ್ವಿಭಾಷೆಯಲ್ಲಿ ಬರ್ತಿದೆ ಪ್ರಮೋದ್ ಶೆಟ್ಟಿ ನಟನೆಯ “ಶೇಷ 2016” ಚಿತ್ರ!
