ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗುರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರು ಕರ್ನಾಟಕ ಹೊರತು ಪಡಿಸಿ ಹೊರ ರಾಜ್ಯಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿದೆ.
ತಮ್ಮ ವ್ಯವಹಾರ ಸಂಬಂಧ 4 ರಾಜ್ಯಗಳಿಗೆ ತೆರಳಲು ಪವಿತ್ರಾ ಗೌಡ ಅವರು 57ನೇ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತಾ, ಗುಜರಾತ್ನ ಸೂರತ್, ಮಹಾರಾಷ್ಟ್ರದ ಮುಂಬೈ ಹಾಗೂ ಮಂತ್ರಾಲಯಕ್ಕೆ ತೆರಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಪವಿತ್ರ ಗೌಡ ಅವರು ಸಲ್ಲಿಸಿದ್ದ ಮನವಿಯ ಅರ್ಜಿಯನ್ನು 57ನೇ ಸಿಸಿಹೆಚ್ ಕೋರ್ಟ್ ಪುರಸ್ಕರಿಸಿ ಮೇ 5 ರಿಂದ 19 ರವರೆಗೆ ಅನುಮತಿ ನೀಡಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ವಿಚಾರಣೆ ಮೇ 20ಕ್ಕೆ ಕೋರ್ಟ್ ಮುಂದೂಡಿಕೆ ಮಾಡಿದೆ.
ಇದನ್ನೂ ಓದಿ : ರಕ್ತಸಿಕ್ತ ಸ್ಥಿತಿಯಲ್ಲಿ ಲಾಯರ್ ಜಗದೀಶ್ ಡೆಡ್ ಬಾಡಿ – ನೈಸ್ ರೋಡಲ್ಲಿ ಅಪಘಾತ ಮಾಡಿ ಹತ್ಯೆ ಮಾಡಿರುವ ಸಾಧ್ಯತೆ!

Author: Btv Kannada
Post Views: 229