ಹೆಡ್ ಕಾನ್​​ಸ್ಟೇಬಲ್ ಕಿಡ್ನಾಪ್​ ಮಾಡಿ ಪೊಲೀಸರಿಂದಲೇ ಮಾರಣಾಂತಿಕ ಹಲ್ಲೆ – ಗೋವಿಂದರಾಜನಗರ ಸಬ್ ಇನ್ಸ್​ಪೆಕ್ಟರ್ ಗುರುಪ್ರಸಾದ್ ಕರ್ಮಕಾಂಡ!

ಆನೇಕಲ್​ : ಪೊಲೀಸರೇ ಹೆಡ್ ಕಾನ್​​ಸ್ಟೇಬಲ್​ನ್ನು ಕಿಡ್ನಾಪ್ ಮಾಡಿ​​ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಜ್ಯ ಗಡಿಭಾಗ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. ಅಪ್ರೋಜ್ ಖಾನ್ ಹಲ್ಲೆಗೊಳಗಾದ ಅತ್ತಿಬೆಲೆ ಠಾಣೆ ಹೆಡ್ ಕಾನ್​​ಸ್ಟೇಬಲ್.

ಬೆಂಗಳೂರಿನ ಗೋವಿಂದರಾಜನಗರದ ಸಬ್ ಇನ್ಸ್​ಪೆಕ್ಟರ್ ಗುರುಪ್ರಸಾದ್ ಮತ್ತು ಸಿಬ್ಬಂದಿಗಳು ಅತ್ತಿಬೆಲೆ ಠಾಣೆ ಹೆಡ್ ಕಾನ್​​ಸ್ಟೇಬಲ್ ಅಪ್ರೋಜ್ ಖಾನ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸದ್ಯ ಗೋವಿಂದರಾಜನಗರ ಠಾಣೆ ಪೊಲೀಸರ ಗೂಂಡಾವರ್ತನೆ ಬಗ್ಗೆ ಉನ್ನತ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಯುತ್ತಿದೆ.

ಸಬ್ ಇನ್ಸ್​ಪೆಕ್ಟರ್ ಗುರುಪ್ರಸಾದ್
ಸಬ್ ಇನ್ಸ್​ಪೆಕ್ಟರ್ ಗುರುಪ್ರಸಾದ್

ASI ಹನುಮಗೌಡ ಪಾಟೀಲ್, ಕಾನ್​ಸ್ಟೇಬಲ್​​​ಗಳಾದ ಅರ್ಜುನ್ ಕಾಂಬ್ಳೆ, ಪ್ರಸನ್ನ, ಸುರೇಶ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯಿಂದ ಅಪ್ರೋಜ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪೋಲಿಸರ ಗುಂಡಾ ವರ್ತನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್​ ಆಗಿದೆ.

ಅಪ್ರೋಜ್ ಖಾನ್, ಅತ್ತಿಬೆಲೆ ಠಾಣೆ ಹೆಡ್ ಕಾನ್​​ಸ್ಟೇಬಲ್
ಅಪ್ರೋಜ್ ಖಾನ್, ಅತ್ತಿಬೆಲೆ ಠಾಣೆ ಹೆಡ್ ಕಾನ್​​ಸ್ಟೇಬಲ್

ಆಗಿದ್ದೇನು? ಇನೋವಾ ಮತ್ತು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಗೋವಿಂದರಾಜನಗರ ಠಾಣೆ 8ಕ್ಕೂ ಅಧಿಕ ಮಂದಿ ಪೊಲೀಸರು, ಅತ್ತಿಬೆಲೆ ಟೋಲ್ ಬಳಿ ಕಾರುನ್ನು ನಿಲ್ಲಿಸಿದ್ದರು. ಈ ವೇಳೆ ಬೈಕ್‌ನಲ್ಲಿ ಹೆಡ್ ಕಾನ್​​ಸ್ಟೇಬಲ್ ಅಪ್ರೋಜ್ ಖಾನ್ ಮಗ ಅಲ್ಲಿಗೆ ಬಂದಿದ್ದ. ಆಗ ಬೈಕ್ ಅಡ್ಡಗಟ್ಟಿ ದಾಖಲಾತಿ ಚೆಕ್ ಮಾಡಬೇಕೆಂದಿದ್ದ ಗೋವಿಂದರಾಜನಗರ ಪೊಲೀಸರು, ಕತ್ತಿನ ಪಟ್ಟಿ ಹಿಡಿದು ಹೆಡ್ ಕಾನ್​​ಸ್ಟೇಬಲ್ ಅಪ್ರೋಜ್ ಖಾನ್ ಮಗ ಅಲಿಅಜಗರ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ.

ನಮ್ಮ ತಂದೆ ಪೊಲೀಸ್ ಎಂದು ಹೇಳಿದ್ರು ಗೋವಿಂದರಾಜನಗರ ಪೊಲೀಸರು ಅಲಿಅಜಗರ್ ಖಾನ್​ ಮೇಲೆ ಹಲ್ಲೆ ನಡೆಸಿದ್ದಾರೆ. ವಿಚಾರ ಗೊತ್ತಾಗುತ್ತಿದ್ದಂತೆ ಅಲ್ಲಿಗೆ ಬಂದ ಹೆಡ್ ಕಾನ್​​ಸ್ಟೇಬಲ್ ಅಪ್ರೋಜ್ ಖಾನ್, ನನ್ನ ಮಗನನ್ನ ಯಾಕೆ ಹೊಡೆಯುತ್ತಿದ್ದೀರಾ ಎಂದು ಗೋವಿಂದರಾಜನಗರ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಗೋವಿಂದರಾಜ ನಗರ ಪೊಲೀಸರು, ನೀನು ಯಾವ ಪೊಲೀಸ್ ಎಂದು ಮೊಬೈಲ್ ಕಿತ್ತುಕೊಂಡು ಅಪ್ರೋಜ್ ಖಾನ್​ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಕಾರಿನಲ್ಲಿ ಕಿಡ್ನಾಪ್ ಮಾಡಿದ ಗೋವಿಂದರಾಜನಗರ ಪೊಲೀಸರು, ಹೆಡ್ ಕಾನ್​​ಸ್ಟೇಬಲ್ ಅಪ್ರೋಜ್ ಖಾನ್​ನನ್ನು ಕೊಲೆ ಮಾಡುವುದಾಗಿ ಅವಾಜ್ ಹಾಕಿದ್ದಾರೆ.

ಈ ಬಗ್ಗೆ ಅಪ್ರೋಜ್ ಖಾನ್ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದ್ರೆ ಪ್ರಕರಣ ದಾಖಲಿಸಿಕೊಳ್ಳಲು ಅತ್ತಿಬೆಲೆ ಪೊಲೀಸರು ಹಿಂದೇಟು ಹಾಕಿದ್ದಾರೆ. ಡಿವೈಎಸ್ಪಿ ಮೋಹನ್ ಕುಮಾರ್, ಇನ್ಸ್ ಪೆಕ್ಟರ್ ರಾಘವ್ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ಆರೋಪ ಕೇಳಿಬಂದಿದೆ. ಸದ್ಯ ಈ ಘಟನೆ ಬಗ್ಗೆ ಪೊಲೀಸ್‌ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ : ಇಂದು SSLC ಫಲಿತಾಂಶ ಪ್ರಕಟ.. ಎಷ್ಟು ಗಂಟೆಗೆ? ನೋಡೋದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

 

 

 

 

Btv Kannada
Author: Btv Kannada

Read More