ಚಿಕ್ಕಮಗಳೂರು : ಚಾರಣ ಪ್ರಿಯರಿಗೆ ಕರ್ನಾಟಕದ ಅರಣ್ಯ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ಕಳೆದ ಹಲವು ತಿಂಗಳುಗಳಿಂದ ಕ್ಲೋಸ್ ಆಗಿದ್ದ ರಾಜ್ಯದ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ ಕುದುರೆಮುಖದ ನೇತ್ರಾವತಿ ಪೀಕ್ ಇನ್ನು ಮುಂದೆ ಓಪನ್ ಆಗಲಿದೆ.
ಹೌದು.. ಕುದುರೆಮುಖದ ನೇತ್ರಾವತಿ ಪೀಕ್ ಕೆಲವು ತಿಂಗಳುಗಳಿಂದ ಕ್ಲೋಸ್ ಮಾಡಲಾಗಿತ್ತು. ಆದ್ರೆ ಈಗ ಚಾರಣದ ಮೇಲೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹಪರ್ವ, ಹಿಡ್ಲುಮನೆ ಫಾಲ್ಸ್ ಹಾಗೂ ಕೊಡಚಾದ್ರಿ ಟ್ರಕ್ಗಳನ್ನು ಇಂದಿನಿಂದ (ಮೇ1) ಜಾರಿಗೆ ಬರುವಂತೆ ಚಾರಣಿಗರಿಗೆ ವೀಕ್ಷಣೆ ಸಲುವಾಗಿ ಮುಕ್ತಗೊಳಿಸಲಾಗಿದೆ.
ಟಿಕೆಟ್ ಬುಕ್ ಮಾಡೋದು ಹೇಗೆ? ಆನ್ಲೈನ್ ವೆಬ್ಸೈಟ್ ಯಾವುದು? ಪ್ರವಾಸಿಗರು ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ https://aranyavihaara.karnataka.gov.in/ ನಲ್ಲಿ ಟಿಕೆಟ್ ಕಾಯ್ದಿರಿಸಬಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಪ್ರಕಟಣೆ ತಿಳಿಸಿದೆ.
ಬುಕಿಂಗ್ಗಳನ್ನು ಕನಿಷ್ಠ 2 ದಿನ ಮುಂಚಿತವಾಗಿ ಮಾಡತಕ್ಕದ್ದು. ಮುಂಗಡ ಬುಕಿಂಗ್ಗಳನ್ನು 30 ದಿನಗಳವರೆಗೆ ಮಾತ್ರ ಸ್ವೀಕರಿಸಲಾಗುತ್ತದೆ ಎಂದು ವೆಬ್ಸೈಟ್ನಲ್ಲಿ ಸ್ಪಷ್ಟಪಡಿಸಲಾಗಿದೆ. ಬುಕ್ ಮಾಡುವಾಗ ಜಿಲ್ಲೆಯನ್ನು ಆಯ್ಕೆ ಮಾಡಿ, ಚಾರಣದ ಹೆಸರನ್ನು ಆಯ್ಕೆ ಮಾಡಬೇಕು. ದಿನಾಂಕವನ್ನು ನಮೂದು ಮಾಡಿ ಆ ದಿನಕ್ಕೆ ಚಾರಣ ಲಭ್ಯವಿದೆಯೇ? ಎಂದು ಪರಿಶೀಲಿಸಿ ಮುಂದುವರೆಯಬೇಕು. ಒಂದೇ ಸ್ಥಳದಲ್ಲಿ ನೂರಾರು ಪ್ರವಾಸಿಗರು ಒಟ್ಟಾಗಿ ಸೇರಿ ಜನಜಂಗುಳಿ ಆಗುವುದನ್ನು ತಡೆಯಲು ರಾಜ್ಯದಲ್ಲಿ ಚಾರಣಕ್ಕೆ ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ : MLA ಮುನಿರತ್ನಗೆ ಬಿಗ್ ರಿಲೀಫ್ – ಹನಿಟ್ರ್ಯಾಪ್ ಕೇಸಲ್ಲಿ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದ ಸಿಐಡಿ!
