JDS ಭದ್ರಕೋಟೆಯಲ್ಲೇ HD ರೇವಣ್ಣಗೆ ಮುಖಭಂಗ – ಹಾಸನ ನಗರಸಭೆ ಅಧ್ಯಕ್ಷರ ಅವಿಶ್ವಾಸ ಮಂಡನೆಯಲ್ಲಿ ಸೋಲು!

ಹಾಸನ : ಜೆಡಿಎಸ್​ ಭದ್ರಕೋಟೆಯಲ್ಲೇ ಮಾಜಿ ಸಚಿವ ಹೆಚ್.​ಡಿ ರೇವಣ್ಣಗೆ ಭಾರೀ ಮುಖಭಂಗವಾಗಿದೆ. ಹೆಚ್ ಡಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಜೋಡಿ ಮತ್ತೆ ಕಮಾಲ್ ಮಾಡಿದೆ.

ಹಾಸನ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ JDS ಮುಖಭಂಗ ಅನುಭವಿಸಿದ್ದು, ಬಿಜೆಪಿ‌ ಸದಸ್ಯರಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ. ಅವಿಶ್ವಾಸದ ವಿರುದ್ಧ ಕಾಂಗ್ರೆಸ್ & ಬಿಜೆಪಿಯ ಸದಸ್ಯರು ಮತ ಚಲಾಯಿಸಿದ್ದು, ಹಾಸನ ನಗರಸಭೆಯಲ್ಲಿ ಬಿಜೆಪಿ 13 ಸದಸ್ಯರ ಬೆಂಬಲ ಹೊಂದಿವೆ. ಬಿಜೆಪಿಯ ಎಲ್ಲಾ ಸದಸ್ಯರಿಂದ ಹಾಲಿ ಅಧ್ಯಕ್ಷನಿಗೆ ಸಂಪೂರ್ಣ ಸಾಥ್ ಸಿಕ್ಕಿದ್ದು, ನಗರಸಭೆಯ ಅವಿಶ್ವಾಸ ಯುದ್ಧದಲ್ಲಿ ಹಾಲಿ‌ ಅಧ್ಯಕ್ಷ ಎಂ. ಚಂದ್ರೇಗೌಡ ಗೆದ್ದಿದ್ದಾರೆ.

ಜೆಡಿಎಸ್​ಗೆ ಸೆಡ್ಡು ಹೊಡೆದು ಚಂದ್ರೇಗೌಡ ಅಧಿಕಾರದಲ್ಲಿ‌ ಮುಂದುವರೆದಿದ್ದಾರೆ. ಜೆಡಿಎಸ್​ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ 26 ಸದಸ್ಯರ ಅವಶ್ಯಕತೆ ಇತ್ತು, ಆದರೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸದ ಪರ 21 ಸದಸ್ಯರು ಮತ ಚಲಾವಣೆ ಮಾಡಿದ್ದಾರೆ. 5 ಸದಸ್ಯರ ಕೊರತೆಯಿಂದ ಅವಿಶ್ವಾಸ ಮಂಡನೆಯಲ್ಲಿ ಜೆಡಿಎಸ್​ಗೆ ಸೋಲನ್ನು ಅನುಭವಿಸಿದೆ. ಇದರೊಂದಿಗೆ ಹಾಲಿ‌ ಅಧ್ಯಕ್ಷ ಎಂ. ಚಂದ್ರೇಗೌಡ ಅವಿಶ್ವಾಸ ಕಣದಲ್ಲಿ ಗೆದ್ದು ಬೀಗಿದ್ದಾರೆ. ಹಾಗಾಗಿ ಜೆಡಿಎಸ್ ಭದ್ರಕೋಟೆ ಹಾಸನದಲ್ಲೇ ಜೆಡಿಎಸ್‌ಗೆ ತೀವ್ರ ಮುಖಭಂಗವಾಗಿದ್ದು,
HD ರೇವಣ್ಣ ವಿರುದ್ಧ ಪ್ರೀತಂ, ಶ್ರೇಯಸ್ ಜೋಡಿ ಮತ್ತೆ ಮೇಲುಗೈ ಸಾಧಿಸಿದೆ.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ‘ಕೈ’ ಪ್ರತಿಭಟನೆ ಯಾವ ಪುರುಷಾರ್ಥಕ್ಕೆ? – ಸಿಎಂ ಸಿದ್ದುಗೆ ಸರಣಿ ಪ್ರಶ್ನೆ ಮೂಲಕ ಜೋಶಿ ಕೌಂಟರ್!

Btv Kannada
Author: Btv Kannada

Read More